ಶ್ರೀನಗರ: ಬೇಸಿಗೆ ರಾಜಧಾನಿ ಶ್ರೀನಗರದ ಹೃದಯಭಾಗವಾದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಮುಂದಾದ ಕುಪ್ವಾರಾದ ಕೆಲ ಬಿಜೆಪಿ ಕಾರ್ಯಕರ್ತರ ಯತ್ನವನ್ನು ಪೊಲೀಸರು ಸೋಮವಾರ ವಿಫಲಗೊಳಿಸಿದ್ದಾರೆ.
1947 ರಲ್ಲಿ ಇದೇ ದಿನದಂದು ಮಹಾರಾಜ ಹರಿಸಿಂಗ್ ಅವರು ಕಾಶ್ಮೀರ ಭಾರತ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದ್ದರು.
ಸೋಮವಾರ ಬೆಳಿಗ್ಗೆ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಮುಂಗಟ್ಟುಗಳು ಮುಚ್ಚಿದ್ದರ ನಡುವೆಯೇ ಬಿಜೆಪಿ ಕಾರ್ಯಕರ್ತರ ಗುಂಪೊಂದು ಏಕಾಏಕಿ ತ್ರಿವರ್ಣ ಧ್ವಜಗಳನ್ನು ಹಿಡಿದು ಪ್ರಮುಖ ಬೀದಿಯಲ್ಲಿ ಪ್ರತ್ಯಕ್ಷವಾಗಿದೆ
Advertisement