ರಾಷ್ಟ್ರಪತಿ ಕೊವಿಂದ್ ಅವರಿಗೆ ಸಿಂಗಾಪುರ ರಾಯಭಾರಿಯಿಂದ ‘ವಿಶ್ವಾಸಾರ್ಹ ಪತ್ರ’ ಅರ್ಪಣೆ

ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್‍ ಸಮಾರಂಭದಲ್ಲಿ ಅರ್ಪಿಸಿದರು.
ರಾಷ್ಟ್ರಪತಿ ಕೊವಿಂದ್
ರಾಷ್ಟ್ರಪತಿ ಕೊವಿಂದ್

ನವದೆಹಲಿ: ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್‍ ಸಮಾರಂಭದಲ್ಲಿ ಅರ್ಪಿಸಿದರು.

ವಿಶ್ವಾಸಾರ್ಹ ಪತ್ರವನ್ನು ಸ್ವೀಕರಿಸಿದ ಕೋವಿಂದ್ ಅವರು, ಇತ್ತೀಚೆಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಿಂಗಾಪುರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಭಾರತ ಮತ್ತು ಸಿಂಗಾಪುರ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸದೃಢವಾಗಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಪ್ರಮುಖ ವೇದಿಕೆಗಳಲ್ಲಿ ಭಾರತಕ್ಕೆ ನೀಡಿದ ದೃಢ ಬೆಂಬಲಕ್ಕಾಗಿ ರಾಷ್ಟ್ರಪತಿ ಸಿಂಗಾಪುರಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪರಸ್ಪರ ಸಹಕಾರ, ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಸ್ನೇಹ ಮತ್ತು ವಿಶ್ವಾಸದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದು ರಾಷ್ಟ್ರಪತಿ ಈ ಸಂದರ್ಭದಲ್ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com