ದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ: ಹರ್ಯಾಣ ಸಚಿವ ಅನಿಲ್ ವಿಜ್
ದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ: ಹರ್ಯಾಣ ಸಚಿವ ಅನಿಲ್ ವಿಜ್

ದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ಲೂಟಿ: ಹರ್ಯಾಣ ಸಚಿವ ಅನಿಲ್ ವಿಜ್ ಆರೋಪ

ದೆಹಲಿ ಸರ್ಕಾರ ಹರ್ಯಾಣಕ್ಕೆ ಸೇರಿದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಿದೆ ಎಂದು ಹರ್ಯಾಣದ ಗೃಹ, ಆರೋಗ್ಯ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ. 
Published on

ಚಂಡೀಗಢ: ದೆಹಲಿ ಸರ್ಕಾರ ಹರ್ಯಾಣಕ್ಕೆ ಸೇರಿದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಿದೆ ಎಂದು ಹರ್ಯಾಣದ ಗೃಹ, ಆರೋಗ್ಯ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ. 

ಪಾಣಿಪತ್ ನಿಂದ ಫರೀದಾಬಾದ್ ನ ಆಸ್ಪತ್ರೆಗೆ ವೈದ್ಯಕೀಯ ಆಕ್ಸಿಜನ್ ನ್ನು ಕೊಂಡೊಯ್ಯುತ್ತಿರಬೇಕಾದರೆ, ದೆಹಲಿ ಸರ್ಕಾರ ಅದನ್ನು ನಿಲ್ಲಿಸಿ ಲೂಟಿ ಹೊಡೆದಿದೆ, ಇನ್ನು ಮುಂದೆ ನಮ್ಮ ಆಕ್ಸಿಕನ್ ಟ್ಯಾಂಕರ್ ಗಳು ಪೊಲೀಸ್ ಕಾವಲಿನಲ್ಲಿ ತೆರಳಲಿವೆ ಎಂದು ಅನಿಲ್ ವಿಜ್ ಹೇಳಿದ್ದಾರೆ. ಕೋವಿಡ್-19 ಹೆಚ್ಚಳದಿಂದ ಆಕ್ಸಿಜನ್ ಬೇಡಿಕೆಯೂ ಹೆಚ್ಚಿದೆ. ಹರ್ಯಾಣಕೆ ಬೇಕಾಗುವಷ್ಟನ್ನು ಉಳಿಸಿಕೊಂಡು ಆ ನಂತರ ಬೇರೆಯವರಿಗೆ ನೀಡುತ್ತೇವೆ ಎಂದು ವಿಜ್ ತಿಳಿಸಿದ್ದಾರೆ.

ಸರ್ಕಾರಗಳು ಲೂಟಿ ಮಾಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅವ್ಯವಸ್ಥೆ ಉಂಟಾಗಲಿದೆ, ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುವುದಕ್ಕಾಗಿ ಪೊಲೀಸ್ ಭದ್ರತೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಗಳು ಸಂಚರಿಸಲಿವೆ, ಈ ಹಿಂದಿನ ಘಟನೆಯ ಬಗ್ಗೆ ದೆಹಲಿ ಸರ್ಕಾರದ ಅಧಿಕಾರಿಗಳಿಗೆ ಪತ್ರಬರೆಯಲಾಗುವುದು ಎಂದು ವಿಜ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com