ಸೋಲಾರ್ ಹಗರಣ: ಉದ್ಯಮಿ ಸರಿತಾ ನಾಯರ್ ಬಂಧನ

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಮಹಿಳಾ ಉದ್ಯಮಿ ಸರಿತಾ ನಾಯರ್ ಅವರನ್ನು ಕೋಜಿಕ್ಕೋಡ್ ಪೊಲೀಸರು  ಬಂಧಿಸಿದ್ದಾರೆ.
ಸರಿತಾ ನಾಯರ್
ಸರಿತಾ ನಾಯರ್
Updated on

ತಿರುವನಂತಪುರಂ: ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಮಹಿಳಾ ಉದ್ಯಮಿ ಸರಿತಾ ನಾಯರ್ ಅವರನ್ನು ಕೋಜಿಕ್ಕೋಡ್ ಪೊಲೀಸರು  ಬಂಧಿಸಿದ್ದಾರೆ.

ಅಬ್ದುಲ್ ಮಜೀದ್ ಎಂಬುವರು ದಾಖಲಿಸಿದ್ದ ದೂರಿನ ವಿಚಾರಣೆಗೆ ಹಾಜರಾಗಲು ಸರಿತಾ ನಾಯರ್ ವಿಫಲರಾಗಿದ್ದರು.

ಕಳೆದ ತಿಂಗಳು ತೀರ್ಪು ಬರಬೇಕಿತ್ತು, ಆದರೆ ಆಕೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಥಮ ದರ್ಜೆ ನ್ಯಾಯಾಲಯ ವಿಚಾರಣೆನ್ನು ಪೂರ್ಣಗೊಳಿಸಿರಲಿಲ್ಲ, ಹೀಗಾಗಿ ಆಕೆಯ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಪೊಲೀಸರು ಸರಿತಾ ನಾಯರ್ ಅವರನ್ನು ಬಂಧಿಸಿದ್ದಾರೆ.

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಮಜೀದ್ ಕೇಸ್ ದಾಖಲಿಸಿದ್ದ ಮೊದಲಿಗರಾಗಿದ್ದರು. ಆಲಪ್ಪುಳ ಮತ್ತು ಪಥನಮತ್ತಟ್ಟ ಜಿಲ್ಲೆಗಳಲ್ಲೂ ಸರಿತಾ ವಿರುದ್ಧ ಇದೇ ರೀತಿಯ ವಾರಂಟ್‌ಗಳು ಬಾಕಿ ಉಳಿದಿವೆ. ಕೋಜಿಕ್ಕೋಡ್ ಗೆ ತೆರಳುವ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com