ಮಿಜೋರಾಂ, ಅಸ್ಸಾಂ ಗಡಿ ವಿವಾದದ ಕುರಿತು ಮಾತುಕತೆ; ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಒಪ್ಪಿಗೆ

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮಿಜೋರಾಂ ಪ್ರತಿನಿಧಿಗಳು ಗುರುವಾರ ಮಾತುಕತೆ ನಡೆಸಿದರು ಮತ್ತು ಅಂತರ್ ರಾಜ್ಯ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ
ಉದ್ವಿಗ್ನತೆ ಉಂಟಾಗಿದ್ದ ಅಸ್ಸಾಂ- ಮಿಜೋರಾಂ ವಿವಾದಿತ ಗಡಿ ಪ್ರದೇಶ
Updated on

ಐಜವ್ಲಾ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮಿಜೋರಾಂ ಪ್ರತಿನಿಧಿಗಳು ಗುರುವಾರ ಮಾತುಕತೆ ನಡೆಸಿದರು ಮತ್ತು ಅಂತರ್ ರಾಜ್ಯ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ಸರ್ಕಾರವು ಮಿಜೋರಾಂಗೆ ಪ್ರಯಾಣಿಸುವುದಕ್ಕೆ ವಿರುದ್ಧವಾಗಿ ನೀಡಿದ್ದ ಮಾರ್ಗಸೂಚಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅವರು ಹೇಳಿದರು.

"ಎರಡೂ ರಾಜ್ಯ ಸರ್ಕಾರಗಳು ಅಂತರ-ರಾಜ್ಯ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿವೆ ಮತ್ತು ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಗಡಿಯನ್ನು ಕೇಂದ್ರ ಪಡೆ ನಿಯೋಜಿಸುವುದನ್ನು ಸ್ವಾಗತಿಸಿವೆ."

"ಈ ಉದ್ದೇಶಕ್ಕಾಗಿ, ಎರಡೂ ರಾಜ್ಯಗಳು ತಮ್ಮ ಅರಣ್ಯ ಮತ್ತು ಪೊಲೀಸ್ ಪಡೆಗಳನ್ನು ಘರ್ಷಣೆ ನಡೆದ ಯಾವುದೇ ಪ್ರದೇಶಗಳಿಗೆ ನಿಯೋಜನೆಗಾಗಿ ಕಳುಹಿಸುವುದಿಲ್ಲ. ಅಸ್ಸಾಂ-ಮಿಜೋರಾಂ ಗಡಿಯಲ್ಲಿರುವ ಕರಿಮಗಂಜ್, ಹೈಲಕಂಡಿ, ಮತ್ತು ಅಸ್ಸಾಂನ ಕ್ಯಾಚಾರ್ ಮತ್ತು ಮಿಜೋರಾಂನ ಮಾಮಿತ್ ಮತ್ತು ಕೊಲಾಸಿಬ್ ಜಿಲ್ಲೆಗಳ ಎಲ್ಲಾ ಪ್ರದೇಶಗಳಲ್ಲಿ ಕೇಂದ್ರ ಪಡೆ ನಿಯೋಜಿಸಲಾಗುವುದು" ಎಂದು ಎರಡು ರಾಜ್ಯಗಳು ನೀಡಿದ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಂಟಿ ಪ್ರಕಟಣೆಗೆ ಅಸ್ಸಾಂನ ಗಡಿ ರಕ್ಷಣೆ ಮತ್ತು ಅಭಿವೃದ್ಧಿ ಸಚಿವ ಅತುಲ್ ಬೋರಾ ಮತ್ತು ಇಲಾಖೆಯ ಆಯುಕ್ತರು, ಕಾರ್ಯದರ್ಶಿ ಜಿ ಡಿ ತ್ರಿಪಾಠಿ ಮತ್ತು ಮಿಜೋರಾಂನ ಗೃಹ ಸಚಿವ ಲಾಲ್ಚಾಮ್ಲಿಯಾನ ಮತ್ತು ಗೃಹ ಕಾರ್ಯದರ್ಶಿ ವನ್ಲಲಾಂಗತ್ಸಾಕ ಅವರು ಸಹಿ ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com