ರವಿ ಕಿಶನ್
ರವಿ ಕಿಶನ್

ಸಿನಿಮಾ ಕಲಾವಿದರಿಗೆ ಗೌರವ ಧನ: ಲೋಕಸಭೆಯಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪ

ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ. 
Published on

ನವದೆಹಲಿ: ಬಿಜೆಪಿ ಸಂಸದ, ಬಹುಭಾಷಾ ನಟ ರವಿ ಕಿಶನ್ ಅವರು ಲೋಕಸಭೆಯಲ್ಲಿ ಸಿನಿಮಾ ಕಲಾವಿದರಿಗೆ ಗೌರವಧನ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಸದನದಲ್ಲಿ ಈ ಹಿಂದೆ ಅರುಣ್ ಜೈಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರು ಗಾಯಕರು, ಗೀತರಚನಕಾರರ ಪರವಾಗಿ ದನಿಯೆತ್ತಿದ್ದನ್ನು ರವಿ ಕಿಶನ್ ಸ್ಮರಿಸಿದ್ದಾರೆ. ಇದೇ ವೇಳೆ ಗಾಯಕರು, ಗೀತರಚನಕಾರರಿಗೆ ಗೌರವ ಧನ ನೀಡಿದ ಬಿಜೆಪಿಗೆ ರವಿ ಕಿಶನ್ ಧನ್ಯವಾದ ಅರ್ಪಿಸಿದರು.

ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ದೀರ್ಘ ಸಮಯ ಕೆಲಸ ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ. 

ಇವೆಲ್ಲಾ ಕಾರಣಗಳಿಂದ ವಯಸ್ಸಾದ ಕಲಾವಿದರ ಆರೋಗ್ಯ ನಿರ್ವಹಣೆ ಚಿಕಿತ್ಸಾ ವೆಚ್ಚ ಎಲ್ಲದಕ್ಕೂ ಸಹಾಯವಾಗುವಂತೆ ಸರ್ಕಾರ ಅವರಿಗೆ ಗೌರವ ಧನ ನಿಗದಿ ಪಡಿಸಬೇಕು ಎಂದು ರವಿ ಕಿಶನ್ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com