ತಮಿಳು ಚಿತ್ರನಿರ್ದೇಶಕ ತ್ಯಾಗರಾಜನ್ ರಸ್ತೆ ಬದಿ ಶವವಾಗಿ ಪತ್ತೆ: ಕಾಡಿದ್ದ ಕಡುಬಡತನ ಮತ್ತು ಖಿನ್ನತೆ

ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು ಎನ್ನಲಾಗಿದೆ.
ನಿರ್ದೇಶಕ ಎಂ.ತ್ಯಾಗರಾಜನ್
ನಿರ್ದೇಶಕ ಎಂ.ತ್ಯಾಗರಾಜನ್
Updated on

ಚೆನ್ನೈ: ಜನಪ್ರಿಯ ತಮಿಳು ಚಿತ್ರ ನಿರ್ದೇಶಕ ಎಂ.ತ್ಯಾಗರಾಜನ್ ಮೃತದೇಹ ಚೆನ್ನೈನ ರಸ್ತೆ ಬದಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಪ್ರಖ್ಯಾತ ಸಿನಿಮಾ ಸ್ಟುಡಿಯೊ ಎ.ವಿ.ಎಂ ಬಳಿ ಪತ್ತೆಯಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರೆಂದು ತಿಳಿದುಬಂದಿದೆ. ಮಾನಗರ ಕಾವಲ್, ವೆಟ್ರಿವೆಲ್ ವೆಟ್ರಿ ಮುಂತಾದ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.

ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು ಎನ್ನಲಾಗಿದೆ. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು. ತಮಿಳುನಾಡು ನಿರ್ದೇಶಕರ ಸಂಘ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com