
ಸಿರಿವೆನ್ನಲ ಸೀತಾರಾಮ ಶಾಸ್ತ್ರಿ
ಹೈದರಾಬಾದ್: ತೆಲುಗಿನ ಖ್ಯಾತ ಸಿನಿ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಅವರು ಇಂದು ನಿಧನರಾಗಿದ್ದು ಅವರಿಗೆ 66 ವರ್ಷ ವಯಸ್ಸಾಗಿತ್ತು.
తరలిరాని లోకాలకు తరలి వెళ్లిన అక్షర తూటా...
— Trivikram Srinivas (@trivikramIn) November 30, 2021
మమ్మల్ని ముందుండి నడిపే ఒక వెలుతురు ఆరిపోయింది..
గురువు గారు చేబ్రోలు సీతారామశాస్త్రి గారు శివైక్యం పొందారు అని బాధాతప్త హృదయంతో తెలియజేస్తున్నాము...
ఓం. శాంతి.... pic.twitter.com/vQyriZrlcy
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಇದೇ ತಿಂಗಳ 24ರಂದು ನ್ಯುಮೋನಿಯಾದಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಬೆಂಬಲದೊಂದಿಗಿದ್ದ ಅವರು ಇಂದು (ಮಂಗಳವಾರ) ಸಂಜೆ 4 ಗಂಟೆಗೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡೈವರ್ಸ್ ಬಳಿಕ ಚಿತ್ರರಂಗದತ್ತ ಮುಖಮಾಡಿದ ನಟಿ: ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ಸಮಂತಾ
ಚೆಂಬೋಲು ಸೀತಾರಾಮಶಾಸ್ತ್ರಿಗಳು ಮೇ 20, 1955 ರಂದು ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಡಾ. ಅನಕಾಪಲ್ಲಿಗೆ ಜನಿಸಿದರು. ಅವರ ತಂದೆ ಸಿವಿ ಯೋಗಿ ಮತ್ತು ತಾಯಿ ಸುಬ್ಬಲಕ್ಷ್ಮಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು ಹತ್ತನೇ ತರಗತಿಯವರೆಗೆ ಅನಕಾಪಲ್ಲಿಯಲ್ಲಿ ಓದಿದ್ದರು. ಅವರು ಕಾಕಿನಾಡ ಮತ್ತು ಆಂಧ್ರ ವಿಶ್ವಕಲಾ ಪರಿಷತ್ನಲ್ಲಿ ಇಂಟರ್ ಮತ್ತು ಬಿಎ ಮುಗಿಸಿದರು. ಅದೇ ಸಮಯದಲ್ಲಿ 10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಬಿಎಸ್ಎನ್ಎಲ್ನಲ್ಲಿ ಉದ್ಯೋಗ ಪಡೆದು ರಾಜಾಜಿನಗರದಲ್ಲಿ ಕೆಲಕಾಲ ಕೆಲಸ ಮಾಡಿದರು.
ಇದನ್ನೂ ಓದಿ: 'ಜಮಾಲಿಗುಡ್ಡ' ಕ್ಕೆ ಬರ್ತಿದ್ದಾರೆ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ!
ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ಅವರ ನಿರ್ದೇಶನದ ‘ಸಿರಿವೆನ್ನೆಲ’ ಚಿತ್ರದಲ್ಲಿ ‘ವಿಧಾತ ತಲಪುನ’ ಹಾಡಿನ ಮೂಲಕ ತಮ್ಮ ಸಿನಿಮಾ ಜೀವನ ಆರಂಭಿಸಿದ ಸೀತಾರಾಮಶಾಸ್ತ್ರಿ ಅವರು ಅದೇ ಚಿತ್ರದ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡು ಪ್ರಸಿದ್ಧರಾದರು. ಸುಮಾರು 800 ಚಿತ್ರಗಳ ಸುಮಾರು 3,000 ಗೀತೆಗಳು ಅವರಿಂದ ರಚಿತವಾಗಿವೆ. ಚಿತ್ರರಂಗಕ್ಕೆ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
11 ಬಾರಿ ನಂದಿ ಪ್ರಶಸ್ತಿ
ಸೀತಾರಾಮಶಾಸ್ತ್ರಿಯವರ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಅವರ ಹಾಡಿಗೆ ಪುಷ್ಠಿ ನೀಡುವಂತೆ ಪ್ರಶಸ್ತಿ ಪುರಸ್ಕಾರಗಳು ಹರಿದು ಬಂದವು. ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರು ಒಟ್ಟು 11 ಬಾರಿ ಆಂಧ್ರ ಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾಲ್ಕು ಬಾರಿ ಫಿಲ್ಮ್ಫೇರ್ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂತೆಯೇ ‘ಕಂಚೆ’ ಚಿತ್ರಕ್ಕಾಗಿ ಸೈಮಾ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗೆ ನಟ ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಲಾ ವೈಕುಂಠಪುರಮುಲೋ ಚಿತ್ರಕ್ಕೂ ಸಿತಾರಾಮಶಾಸ್ತ್ರಿ ಅವರು ಗೀತರಚನೆ ಮಾಡಿದ್ದರು.