ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆ: ಸ್ಕೀಮ್ ನ ಲಾಭಾಂಶಕ್ಕಾಗಿ ತಂಗಿಯನ್ನೇ ಮದುವೆಯಾದ ಅಣ್ಣ!

ಅಣ್ಣನೊಬ್ಬ ತಂಗಿಯನ್ನೇ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಮದುವೆಯಾದ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​​ನ ತುಂಡ್ಲಾ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಫಿರೋಜಾಬಾದ್: ಅಣ್ಣನೊಬ್ಬ ತಂಗಿಯನ್ನೇ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಮದುವೆಯಾದ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​​ನ ತುಂಡ್ಲಾ ಎಂಬಲ್ಲಿ ನಡೆದಿದೆ.

ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರೊಂದಿಗೆ ಜೋಡಿಗಳ ಮದುವೆಯನ್ನು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲಾಗಿದೆ. ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಳೆದ ಶನಿವಾರ ತುಂಡ್ಲಾ ಬ್ಲಾಕ್ ಅಭಿವೃದ್ಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪುರಸಭೆಯ ತುಂಡ್ಲಾ, ಬ್ಲಾಕ್ ತುಂಡ್ಲಾ ಮತ್ತು ಬ್ಲಾಕ್ ನರ್ಖಿಯ 51 ಜೋಡಿಗಳು ವಿವಾಹವಾಗಿದ್ದರು. ಸಮಾರಂಭದಲ್ಲಿ ಎಲ್ಲಾ ದಂಪತಿಗಳಿಗೆ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ನೀಡಲಾಗಿತ್ತು.

ಈ ಕಾರ್ಯಕ್ರಮದ ಕೆಲ ಜೋಡಿಗಳ ವಿಡಿಯೋ ಹಾಗೂ ಫೋಟೋಗಳು ಆ ಭಾಗದ ಜನರಿಗೆ ಹಾಗೂ ಗ್ರಾಮದ ಮುಖಂಡರಿಗೆ ಸಿಕ್ಕಾಗ ಸಮಾರಂಭದಲ್ಲಿ ನಾಲ್ಕು ಫೋರ್ಜರಿ ಪ್ರಕರಣಗಳು ವರದಿಯಾಗಿವೆ. ಈ ವೇಳೆ ಸಹೋದರ ಸಹೋದರಿಯನ್ನೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಯ ನಂತರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಚಂದ್ರಭಾನ್ ಸಿಂಗ್ ಅವರು ನಾಗಲಾ ಪ್ರೇಮ್ (ವಾಚ್) ಸಹೋದರನ ವಿರುದ್ಧ ದೂರು ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮರಸೇನ ಕುಶಾಲಪಾಲ್, ಗ್ರಾಮ ಪಂಚಾಯಿತಿ ಘಿರೋಲಿ ಕಾರ್ಯದರ್ಶಿ ಅನುರಾಗ್ ಸಿಂಗ್, ಸಹಕಾರಿ ಸುಧೀರ್ ಕುಮಾರ್, ಎಡಿಒ ಸಮಾಜ ಕಲ್ಯಾಣ ಇಲಾಖೆ ಎಡಿಒ ಚಂದ್ರಭಾನ್ ಸಿಂಗ್ ಅವರಿಂದ ವಿವಾಹಕ್ಕಾಗಿ ಶೋಧ ನಡೆಸಿ ಪರಿಶೀಲಿಸಲಾಗಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ನರೇಶ್ ಕುಮಾರ್ ತಿಳಿಸಿದ್ದಾರೆ. ಸರಿಯಾದ ವಿವರಣೆ ದೊರೆಯದಿದ್ದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.

ತುಂಡ್ಲಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ ನರೇಶ್ ಕುಮಾರ್ ಮಾತನಾಡಿ, ನಕಲಿ ವಿವಾಹ ಮಾಡಿಕೊಂಡಿರುವ ಸಹೋದರನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮದುವೆಯಾದ ಮಹಿಳೆಯಿಂದ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನು ವಾಪಸ್​​ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಯ ಎರಡು ಆಧಾರ್ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿವಾಹ ಸಮಾರಂಭದಲ್ಲಿ ನೀಡಲಾಗುವ ಕೊಡುಗೆ ಹಾಗೂ ಬಹುಮಾನ ಸೇರಿದಂತೆ ಗೃಹಪಯೋಗಿ ವಸ್ತುಗಳ ಪಡೆಯಲು ಈ ರೀತಿ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಇದೀಗ ಈ ವಿವಾಹಕ್ಕಾಗಿ ದಂಪತಿಯ ಪಟ್ಟಿ ಹಾಗೂ ಅವರ ಪೂರ್ವಪರ ಪರಿಶೀಲಿಸಿದ ಅಧಿಕಾರಿಗಳಿಗೂ ಈ ಘಟನೆ ಕುರಿತು ಉತ್ತರಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಸಾಮೂಹಿಕ ವಿವಾಹ ಯೋಜನೆಯಡಿ ಉತ್ತರ ಪ್ರದೇಶ ಸರ್ಕಾರವು ಪ್ರತಿ ದಂಪತಿಗಳಿಗೆ ಗೃಹೋಪಯೋಗಿ ವಸ್ತುಗಳಲ್ಲದೇ  35,000 ರೂ. ನಗದನ್ನೂ ಕೂಡ ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com