ಕೊರೋನಾ ಸೋಂಕು ಹರಡುವಿಕೆ ನಿಲ್ಲಲು ಗೋಮೂತ್ರ ಕುಡಿಯಿರಿ: ಬಿಜೆಪಿ ಶಾಸಕ

ದೇಶದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಗೋಮೂತ್ರ ಕುಡಿಯುವಂತೆ ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಬಿಜೆಪಿ ಶಾಸಕ ಸುರೇಂದ್ರ ಸಿಂಗ್
ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಲಖನೌ: ದೇಶದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಗೋಮೂತ್ರ ಕುಡಿಯುವಂತೆ ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಹೇಳಿದ್ದಾರೆ. 

ಗೋಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ವಿಧಾನಗಳ ಕುರಿತಾದಂತೆ ಸುರೇಂದ್ರ ಸಿಂಗ್‌ ವೀಡಿಯೋ ಮೂಲಕ ತಿಳಿಸಿದ್ದಾರೆ. ವಿಡಿಯೋದಲ್ಲಿ ಜನರಿಗೆ ಗೋಮೂತ್ರ ಹೇಗೆ ಸೇವಿಸಬೇಕು ಎಂದು ತಿಳಿಸುವುದರೊಂದಿಗೆ ತಾವೂ ಗೋಮೂತ್ರ ಕುಡಿದಿರುವುದು ಕಂಡು ಬಂದಿದೆ. 

ಪ್ರತೀನಿತ್ಯ 18 ಗಂಟೆಗಳ ಕಾಲ ನಾನು ಜನಸೇವೆ ಮಾಡುತ್ತಿದ್ದು, ಇದಕ್ಕೆ ಗೋಮೂತ್ರ ಸೇವನೆಯಿಂದ ದೊರಕಿದ ಆರೋಗ್ಯವೇ ಕಾರಣ ಎಂದು ಅವರು ಸುರೇಂದ್ರ ಸಿಂಗ್ ಅವರು ಹೇಳಿದ್ದಾರೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಮುಚ್ಚಳದಷ್ಟು ಗೋಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಬೇಕು ಎಂದ ಅವರು, ತಾನು ವಿಜ್ಞಾನವನ್ನು ನಂಬದಿದ್ದರೂ ಗೋಮೂತ್ರವನ್ನು ನಂಬುತ್ತೇನೆ. ಒಂದು ಲೋಟ ನೀರಿಗೆ ಗೋಮೂತ್ರ ಬೆರೆಸಿ ಕುಡಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. 

ಬಿಜೆಪಿ ಶಾಸಕರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೇಳಿಕೆ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com