ಉತ್ತರಪ್ರದೇಶ ಯೋಗಿ ಅಭಿವೃದ್ಧಿ ಜಾಹೀರಾತಿನಲ್ಲಿ ಪ. ಬಂಗಾಳ ಫ್ಲೈ ಓವರ್ ಅವಾಂತರ: ಟಿಎಂಸಿ ಲೇವಡಿ

ಯೋಗಿ ಜಾಹೀರಾತೊಂದರಲ್ಲಿ ಪ.ಬಂಗಾಳದ ಫ್ಲೈ ಓವರ್ ಚಿತ್ರವನ್ನು ಬಳಸಿಕೊಳ್ಳಲಾಗಿರುವುದನ್ನು ಟಿ ಎಂ ಸಿ ಪಕ್ಷ ಪತ್ತೆ ಹಚ್ಚಿದ್ದು, ಪ್ರಕರಣ ವಿವಾದದ ರೂಪ ಪಡೆದುಕೊಂಡಿದೆ. 
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ
Updated on

ಲಕನೌ: ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿರುವ ಯೋಗಿ ಆದಿತ್ಯನಾಥರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ತಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಜಾಹೀರಾತನ್ನು ಪ್ರಕಟಿಸಿತ್ತು. ಆ ಜಾಹೀರಾತುಗಳಲ್ಲಿ ಯೋಗಿ ಸರ್ಕಾರ ರಾಜ್ಯದ ರಸ್ತೆಗಳು, ಮೂಲ ಸೌಕರ್ಯಗಳ ಚಿತ್ರಗಳ ಜೊತೆಗೆ ಯೋಗಿ ಭಾವಚಿತ್ರವನ್ನು ಬಳಸಿಕೊಳ್ಳಲಾಗಿತ್ತು.


ಯೋಗಿ ಜಾಹೀರಾತೊಂದರಲ್ಲಿ ಪ.ಬಂಗಾಳದ ಕೋಲ್ಕತಾ ಫ್ಲೈ ಓವರ್ ಚಿತ್ರವನ್ನು ಬಳಸಿಕೊಳ್ಳಲಾಗಿರುವುದನ್ನು ಟಿ ಎಂ ಸಿ ಪಕ್ಷ ಪತ್ತೆ ಹಚ್ಚಿದ್ದು, ಪ್ರಕರಣ ವಿವಾದದ ರೂಪ ಪಡೆದುಕೊಂಡಿದೆ. 


ಯೋಗಿಯವರ ಅಭಿವೃದ್ಧಿ ಕೆಲಸಗಳ ಜಾಹೀರಾತಿನಲ್ಲಿ ಪ.ಬಂಗಾಳದ ಫ್ಲೈ ಓವರ್ ಇರುವುದರಿಂದ ಬಿಜೆಪಿ ಸರ್ಕಾರ ಟಿ.ಎಂ.ಸಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com