ದೆಹಲಿ ಸರ್ಕಾರದ ಯೋಜನೆಗಳಿಗೆ ನಟ ಸೋನು ಸೂದ್ ರಾಯಭಾರಿ

ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಯೋಜನೆಗಳ ರಾಯಭಾರಿಯಾದ ನಟ ಸೋನುಸೂದ್ ನೇಮಕವಾಗಿದ್ದಾರೆ.
ನಟ ಸೋನು ಸೂದ್-ಸಿಎಂ ಕೇಜ್ರಿವಾಲ್
ನಟ ಸೋನು ಸೂದ್-ಸಿಎಂ ಕೇಜ್ರಿವಾಲ್

ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಯೋಜನೆಗಳ ರಾಯಭಾರಿಯಾದ ನಟ ಸೋನುಸೂದ್ ನೇಮಕವಾಗಿದ್ದಾರೆ.

ಹೌದು.. ನಟ ಸೋನು ಸೂದ್ ಅವರು ದೆಹಲಿ ಎಎಪಿ ಸರ್ಕಾರದ 'ದೇಶ್ ಕಾ ಮೆಂಟರ್ಸ್' ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.  ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ವಿಶೇಷ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶನ ನೀಡಲಾಗುವುದು ಎಂದು  ಶುಕ್ರವಾರ ಹೇಳಿದ್ದಾರೆ.

"ಸರ್ಕಾರಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳು ತೀರಾ ಬಡತನದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡಲು ಕೆಲವೇ ಜನರಿದ್ದಾರೆ. ಈ ಮಕ್ಕಳಿಗೆ ಮಾರ್ಗದರ್ಶಕರಾಗಲು ನಾವು ವಿದ್ಯಾವಂತರಿಗೆ ಮನವಿ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಸೋನು ಸೂದ್ ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ" ಎಂದು ಕೇಜ್ರಿವಾಲ್ ಹೇಳಿದರು .

ಕೇಜ್ರಿವಾಲ್ ಮತ್ತು ಸೋನು ಸೂದ್ ಇಬ್ಬರೂ ಬೆಳಿಗ್ಗೆ ಭೇಟಿಯಾದಾಗ ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದರು.

"ನಾವು ಈ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದೇವೆ ಮತ್ತು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ" ಎಂದು ಕೇಜ್ರಿವಾಲ್ ಸೂದ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com