ಭಾರತ ಮಾತೆಯ ಹೆಮ್ಮೆಯ ಪುತ್ರ ಜನರಲ್ ಬಿಪಿನ್ ರಾವತ್: ಸೇನಾ ಕುಟುಂಬದಲ್ಲಿ ಹುಟ್ಟಿ ರಕ್ಷಣಾ ಪಡೆಯ ಮುಖ್ಯಸ್ಥ ಹುದ್ದೆಗೆ ಸಾಗಿದ ರೋಚಕ ಪಯಣ

ಸರ್ವೋತ್ಕೃಷ್ಟ ಮಿಲಿಟರಿ ಕಮಾಂಡರ್, ಭಾರತ ದೇಶದ ಭೌಗೋಳಿಕ ರಾಜಕೀಯ ಕ್ರಾಂತಿಗಳ ಬಗ್ಗೆ ಅಪರೂಪದ, ಅಸಾಮಾನ್ಯ ತಿಳುವಳಿಕೆಯನ್ನು ಹೊಂದಿದ್ದರು, ಭಾರತವು ಎದುರಿಸುವ ಅಸಂಖ್ಯಾತ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯ ಮೂರೂ ವಿಭಾಗಗಳ ಮಿಲಿಟರಿ ಸಿದ್ಧಾಂತವನ್ನು ರೂಢಿಸಿಕೊಂಡಿದ್ದರು. ಈಶಾನ್ಯ ಭಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವವನ್ನು ತಗ್ಗಿಸಿದ ಕೀರ
ಜ.ಬಿಪಿನ್ ರಾವತ್ (ಸಂಗ್ರಹ ಚಿತ್ರ)
ಜ.ಬಿಪಿನ್ ರಾವತ್ (ಸಂಗ್ರಹ ಚಿತ್ರ)

ನವದೆಹಲಿ: ಸರ್ವೋತ್ಕೃಷ್ಟ ಮಿಲಿಟರಿ ಕಮಾಂಡರ್, ಭಾರತ ದೇಶದ ಭೌಗೋಳಿಕ ರಾಜಕೀಯ ಕ್ರಾಂತಿಗಳ ಬಗ್ಗೆ ಅಪರೂಪದ, ಅಸಾಮಾನ್ಯ ತಿಳುವಳಿಕೆಯನ್ನು ಹೊಂದಿದ್ದರು, ಭಾರತವು ಎದುರಿಸುವ ಅಸಂಖ್ಯಾತ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯ ಮೂರೂ ವಿಭಾಗಗಳ ಮಿಲಿಟರಿ ಸಿದ್ಧಾಂತವನ್ನು ರೂಢಿಸಿಕೊಂಡಿದ್ದರು. ಈಶಾನ್ಯ ಭಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವವನ್ನು ತಗ್ಗಿಸಿದ ಕೀರ್ತಿ ಜನರಲ್ ಬಿಪಿನ್ ರಾವತ್ ಅವರಿಗೆ ಸಲ್ಲಬೇಕು.

ಭಾರತದ ರಕ್ಷಣಾ ಪಡೆಯ ಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇನೆಯ ಮೂರೂ ವಿಭಾಗಗಳಲ್ಲಿ ಹಿಡಿತವನ್ನು ಸಾಧಿಸಿ ಮೂರೂ ಸೇವೆಗಳಲ್ಲಿ ಸಹಭಾಗಿತ್ವವನ್ನು ತಂದವರು. ಎಂತಹ ಕಠಿಣ ಸವಾಲುಗಳನ್ನು ನಿಗದಿತ ಸಮಯದೊಳಗೆ ತಲುಪುವ ಗುರಿಯನ್ನು ಹೊಂದಲು ಮೂರೂ ಸೇನೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಅವರು ಸಾಕಷ್ಟು ಒತ್ತು ನೀಡಿದ್ದರು. 

ನೇರ, ನಿರ್ಭೀತ ಮತ್ತು ಕೆಲವು ಬಾರಿ ಮೊಂಡುತನಕ್ಕೆ ಜನರಲ್ ಬಿಪಿನ್ ರಾವತ್ ಹೆಸರುವಾಸಿಯಾಗಿದ್ದರು, ಮಹೋನ್ನತ ಮಿಲಿಟರಿ ಕಮಾಂಡರ್ ಅವರು ಸೇನಾ ಮುಖ್ಯಸ್ಥ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸಹ ಸುದ್ದಿಯಾಗಿದ್ದರು. 

2016 ರಿಂದ 2019 ರ ನಡುವೆ ಸೇನಾ ಮುಖ್ಯಸ್ಥರಾಗಿದ್ದ ವೇಳೆ ಜ.ರಾವತ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಕಠಿಣ ನೀತಿಯನ್ನು ತಳೆದಿದ್ದರು. 2017ರಲ್ಲಿ ಭಾರತ-ಚೀನಾ ಗಡಿಯ ಡೋಕ್ಲಮ್ ನಲ್ಲಿ ಸೇನೆ ನಿಯೋಜನೆಗಿಂತ ಬಹಳ ಸಮಯಗಳ ಹಿಂದೆ ಜನರಲ್ ರಾವತ್ ಅವರು, ಭಾರತಕ್ಕೆ ಚೀನಾ ಕಡೆಯಿಂದ ಸಾಕಷ್ಟು ಭದ್ರತಾ ಸವಾಲುಗಳು ಮತ್ತು ದೀರ್ಘ ಕಾಲದ ಸಮಸ್ಯೆಗಳು ಎದುರಾಗಲಿದ್ದು ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸಿ ಯುದ್ಧವನ್ನು ಎದುರಿಸುವ ಅಗತ್ಯವಿದೆ ಎಂದು ಮನಗಂಡು ಎಚ್ಚರಿಕೆ ನೀಡಿದ್ದರು.

2015ರಲ್ಲಿ ಮಯನ್ಮಾರ್ ನಲ್ಲಿ ನಾಗಾ ಉಗ್ರರಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಜ.ರಾವತ್ ಅವರಿಗೆ ಸಲ್ಲುತ್ತದೆ. 

ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳ ವಿರುದ್ಧ ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದಾಗ ಜ.ರಾವತ್ ಯೋಜನೆಯ ಭಾಗವಾಗಿದ್ದರು, ಪಾಕಿಸ್ತಾನ ಸೇನೆಯಲ್ಲಿ ಸಾಕಷ್ಟು ಸಾವು-ನೋವುಗಳು ಉಂಟಾಗಿದ್ದವು. 

ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನ ಆಳದಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಹೊಡೆದುರುಳಿಸಿದಾಗ ಜನರಲ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿದ್ದರು, ಕಾರ್ಯಾಚರಣೆಗೆ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಸೇನೆಗೆ ಒದಗಿಸಿದವರು ಜನರಲ್ ರಾವತ್. 

ಜನರಲ್ ಬಿಪಿನ್ ರಾವತ್ ಅವರು ರಕ್ಷಣಾ ಪಡೆಯ(CDS) ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಸೇನಾಧಿಕಾರಿ. ಜನರಲ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಸೇರಿದಂತೆ ಹಲವಾರು ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ನಾಲ್ಕು ದಶಕಗಳ ಕಾಲ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದರು.

2017 ರಲ್ಲಿ, ಜನರಲ್ ರಾವತ್ ಅವರು ಮೇಜರ್ ಲೀತುಲ್ ಗೊಗೊಯ್ ಅವರಿಗೆ ದಂಗೆ-ನಿಗ್ರಹ ಕಾರ್ಯಾಚರಣೆಯಲ್ಲಿನ ಪ್ರಯತ್ನಗಳಿಗಾಗಿ ಸೇನಾ ಮುಖ್ಯಸ್ಥರ ಪ್ರಶಂಸಾ ಪತ್ರವನ್ನು ನೀಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದರು. 2017 ರ ಶ್ರೀನಗರ ಉಪಚುನಾವಣೆಯಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಕಾರ್ಯಾಚರಣೆಯಲ್ಲಿ ಗೊಗೋಯ್ ಒಬ್ಬ ವ್ಯಕ್ತಿಯನ್ನು ತನ್ನ ಮಿಲಿಟರಿ ಜೀಪಿಗೆ ಕಟ್ಟಿದ್ದರು. ಈ ನಡೆ ಹಲವರಿಂದ ಟೀಕೆಗಳಿಗೆ ಗುರಿಯಾಗಿತ್ತು .

2019 ರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಿಗೆ ಸಂಬಂಧಿಸಿದ ಜನರಲ್ ರಾವತ್ ನೀಡಿದ್ದ ಹೇಳಿಕೆಗಳು ಸಹ ವಿವಾದಕ್ಕೆ ಗುರಿಯಾಗಿದ್ದವು. ಸೆಪ್ಟೆಂಬರ್‌ನಲ್ಲಿ, ಜನರಲ್ ರಾವತ್ ಅವರು "ನಾಗರಿಕತೆಗಳ ಘರ್ಷಣೆ" ಸಿದ್ಧಾಂತದ ಬಗ್ಗೆ ಮಾತನಾಡುತ್ತಾ ಪಾಶ್ಚಿಮಾತ್ಯ ನಾಗರಿಕತೆ ಮತ್ತು ಇರಾನ್ ಮತ್ತು ಟರ್ಕಿಯಂತಹ ದೇಶಗಳೊಂದಿಗೆ ಚೀನಾದ ಬೆಳೆಯುತ್ತಿರುವ ಸಂಬಂಧವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವಿದೇಶಾಂಗ ಮಂತ್ರಿ ಜೈಶಂಕರ್ ವಿವಾದಿತ ಹೇಳಿಕೆಗಳಿಂದ ಸರ್ಕಾರವನ್ನು ದೂರವಿರಿಸುವಂತೆ ಹೇಳಿದ್ದರು.

ಹುಟ್ಟು, ಬಾಲ್ಯ: ಜನರಲ್ ರಾವತ್ ಅವರು ಹುಟ್ಟಿದ್ದು ಉತ್ತರಾಖಂಡ ರಾಜ್ಯದ ಪೌರಿಯಲ್ಲಿ 1958ರ ಮಾರ್ಚ್ 16ರಂದು. ಹಲವು ತಲೆಮಾರುಗಳಿಂದ ಅವರ ಕುಟುಂಬ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿತ್ತು. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಸೈಂಜಿ ಗ್ರಾಮದವರು. ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ್ದರು. 

ಡೆಹ್ರಾಡೂನ್ ನ ಕೇಂಬ್ರಿಯಾನ್ ಹಾಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಶಿಮ್ಲಾದ ಸೈಂಟ್ ಎಡ್ವರ್ಡ್ ಶಾಲೆಯಲ್ಲಿ ಮಾಧ್ಯಮಿಕ, ಪ್ರೌಢ ಶಿಕ್ಷಣ ಮುಗಿಸಿ ನಂತರ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಮಾಂಡ್ ಮತ್ತು ಕಾನ್ಸಾಸ್‌ನ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಜನರಲ್ ಸ್ಟಾಫ್ ಕಾಲೇಜಿನಲ್ಲಿ ಹೈಯರ್ ಕಮಾಂಡ್ ಕೋರ್ಸ್‌ನ ಪದವಿ ಪಡೆದರು. 

ಸೇನೆಯಲ್ಲಿ ಸೇವೆ: ರಾವತ್ ಅವರನ್ನು ಡಿಸೆಂಬರ್ 16, 1978 ರಂದು 11 ಗೂರ್ಖಾ ರೈಫಲ್ಸ್‌ನ 5 ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು, ಕರ್ನಲ್ ಆಗಿ, ಅವರು ಕಿಬಿತುದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪೂರ್ವ ವಲಯದಲ್ಲಿ 11 ಗೂರ್ಖಾ ರೈಫಲ್ಸ್‌ನ 5 ನೇ ಬೆಟಾಲಿಯನ್‌ಗೆ ಕಮಾಂಡರ್ ಆಗಿದ್ದರು. ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದ ಅವರು ಸೋಪೋರ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನ 5 ಸೆಕ್ಟರ್‌ಗೆ ಕಮಾಂಡರ್ ಆಗಿದ್ದರು.

ನಂತರ ಅವರು ಯುಎನ್ ಮಿಷನ್ ಅಡಿಯಲ್ಲಿ ಕಾಂಗೋದಲ್ಲಿ ಅಧ್ಯಾಯ VII ಮಿಷನ್‌ನಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್‌ಗೆ ನಿಯೋಜಿಸಲ್ಪಟ್ಟರು. 

ಮೇಜರ್ ಜನರಲ್ ಆಗಿ ಬಡ್ತಿ ಪಡೆದ ನಂತರ, ರಾವತ್ ಉರಿಯಲ್ಲಿ 19 ನೇ ಪದಾತಿ ದಳದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನರಲ್ ಆಗಿ, ಪುಣೆಯಲ್ಲಿ ದಕ್ಷಿಣ ಸೇನೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ದಿಮಾಪುರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ III ಕಾರ್ಪ್ಸ್‌ಗೆ ಕಮಾಂಡರ್ ಆಗಿದ್ದರು. 1 ಜನವರಿ 2016 ರಂದು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಸದರ್ನ್ ಕಮಾಂಡ್ ಆಗಿ ನೇಮಕಗೊಂಡರು. 

ಡಿಸೆಂಬರ್ 2016 ರಲ್ಲಿ, ಅವರು ಇಬ್ಬರು ಹಿರಿಯ ಲೆಫ್ಟಿನೆಂಟ್ ಜನರಲ್‌ಗಳಾದ ಪ್ರವೀಣ್ ಬಕ್ಷಿ ಮತ್ತು ಪಿ ಎಂ ಹರಿಜ್ ಅವರನ್ನು 27 ನೇ ಸೇನಾ ಸಿಬ್ಬಂದಿಯಾಗಿ ನೇಮಿಸಿದರು. ಜನರಲ್ ಬಿಪಿನ್ ರಾವತ್ ದಂಪತಿ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com