ವಾರಣಾಸಿಯಲ್ಲಿ ಮತ್ತೆ ಪ್ರಧಾನಿ ಮೋದಿ: 2,095 ಕೋಟಿ ರೂ ವೆಚ್ಚದ 27 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

ತಮ್ಮ ಲೋಕಸಭಾ ಸ್ವಕ್ಷೇತ್ರ ವಾರಣಾಸಿಗೆ ಮತ್ತೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಬಾರಿ ಸುಮಾರು 2,095 ಕೋಟಿ ರೂ ವೆಚ್ಚದ 27 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ವಾರಣಾಸಿ: ತಮ್ಮ ಲೋಕಸಭಾ ಸ್ವಕ್ಷೇತ್ರ ವಾರಣಾಸಿಗೆ ಮತ್ತೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಬಾರಿ ಸುಮಾರು 2,095 ಕೋಟಿ ರೂ ವೆಚ್ಚದ 27 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

ಇಂದು ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸಂಸದೀಯ ಕ್ಷೇತ್ರದಲ್ಲಿ 2095 ಕೋಟಿ ರೂ.ಗಳ 27 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಅಂತೆಯೇ ಬಹು ನಿರೀಕ್ಷಿತ 'ಬನಾಸ್ ಡೈರಿ ಸಂಕುಲ್'ಗೆ ಶಂಕುಸ್ಥಾಪನೆ ಮಾಡಿದರು. ಇದಲ್ಲದೆ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ 'ಘರೌನಿ' ವಿತರಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, 'ಹೈನುಗಾರಿಕೆ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುವುದರಿಂದ ಇಂದು 'ಬನಸ್ ಡೈರಿ ಸಂಕುಲ'ಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ನಾನು ಇಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ದೇಶವು 'ಕಿಸಾನ್ ದಿವಸ್' ಅನ್ನು ಆಚರಿಸುತ್ತಿದೆ ಎಂದು ಹೇಳಿದರು.

ಎರಡು ವಾರಗಳ ಹಿಂದೆ ಮೋದಿ ವಾರಣಾಸಿಯಲ್ಲಿದ್ದರು. ಕಾಶಿ ಕಾರಿಡಾರ್ ಉದ್ಘಾಟನೆ ಮಾಡಿದ್ದರು. ಕಳೆದ 10 ದಿನಗಳಲ್ಲಿ ಎರಡನೇ ಬಾರಿಗೆ ಪ್ರಧಾನಿ ವಾರಾಣಸಿಗೆ ಭೇಟಿ ನೀಡಿದ್ದಾರೆ. ಡಿಸೆಂಬರ್‌ 13ರಂದು ಅವರು ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಫಾಟಿಸಿದ್ದರು. ಕರ್ಖಿಯಾಂವದಲ್ಲಿರುವ ಉತ್ತರ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಫುಡ್‌ ಪಾರ್ಕ್‌ನಲ್ಲಿ 'ಬನಸ್‌ ಡೈರಿ ಸಂಕುಲ್‌'ಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು.

ದೇಶದ ರೈತರನ್ನು ಆಚರಿಸುವ ಕಿಸಾನ್ ದಿವಸ್‌ನಲ್ಲಿ, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಸರ್ಕಾರವು ನಿರಾಕರಿಸಿದ್ದರಿಂದ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸುಮಾರು 750 ರೈತರು ಸಾವನ್ನಪ್ಪಿದ್ದರು.  ಫೆಬ್ರವರಿ 2022 ರಿಂದ ಪ್ರಾರಂಭವಾಗುವ ಹಲವಾರು ರಾಜ್ಯ ಚುನಾವಣೆಗಳೊಂದಿಗೆ, ಸರ್ಕಾರವು ಅಂತಿಮವಾಗಿ ಕಳೆದ ತಿಂಗಳು ಕಾನೂನುಗಳನ್ನು ರದ್ದುಗೊಳಿಸಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com