ವನ್ಯಜೀವಿಗಳ ರೋಗ ಅಧ್ಯಯನಕ್ಕೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಆಧುನಿಕ ಸಾಧನ ಅತ್ಯಗತ್ಯ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

ಪ್ರಾಣಿಸಂಗ್ರಹಾಲಯಗಳು ವನ್ಯಜೀವಿಗಳಲ್ಲಿನ ರೋಗಗಳನ್ನು ಅಧ್ಯಯನ ಮಾಡಲು, ಅವುಗಳ ಆನುವಂಶಿಕ ವಸ್ತುಗಳನ್ನು ಸಂರಕ್ಷಿಸಲು ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಪಡೆಯಲು ವಿಭಿನ್ನ ಆಧುನಿಕ ಜೀವಶಾಸ್ತ್ರ ಸಾಧನಗಳನ್ನು ಪಡೆಯಬೇಕಿದೆ ಎಂದು  ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ಹೈದರಾಬಾದ್: ದೇಶಾದ್ಯಂತ ಇರುವ ಪ್ರಾಣಿಸಂಗ್ರಹಾಲಯಗಳು ವನ್ಯಜೀವಿಗಳಲ್ಲಿನ ರೋಗಗಳನ್ನು ಅಧ್ಯಯನ ಮಾಡಲು, ಅವುಗಳ ಆನುವಂಶಿಕ ವಸ್ತುಗಳನ್ನು ಸಂರಕ್ಷಿಸಲು ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಪಡೆಯಲು ವಿಭಿನ್ನ ಆಧುನಿಕ ಜೀವಶಾಸ್ತ್ರ ಸಾಧನಗಳನ್ನು ಪಡೆಯಬೇಕಿದೆ ಎಂದು  ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗಾಗಿರುವ (ಲಕೋನ್ಸ್)ಸಿಎಸ್‌ಐಆರ್-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸಿಸಿಎಂಬಿಗೆ ಭೇಟಿ ನೀಡಿದ ವೆಂಕಯ್ಯ ನಾಯ್ಡು, ವನ್ಯಜೀವಿ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಿ, ಲಕೋನ್ಸ್‌ನಲ್ಲಿ ವನ್ಯಜೀವಿ ಸಂರಕ್ಷಣೆಗಾಗಿರುವ ಮುಖ್ಯ  ಸೌಲಭ್ಯಗಳನ್ನು ವೀಕ್ಷಿಸಿದರು.

ಇದೇ ವೇಳೆ ಲಾಕೋನೆಸ್ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರ ಬರೆದಿರುವ ‘ವನ್ಯಜೀವಿ ಸಂರಕ್ಷಣೆಗಾಗಿ ಆನುವಂಶಿಕ ಸಂಪನ್ಮೂಲ ಬ್ಯಾಂಕುಗಳ ಪರಿಚಯ’ ಎಂಬ ಪುಸ್ತಕವನ್ನೂ ಅವರು ಬಿಡುಗಡೆ ಮಾಡಿದರು. "ಲಕೋನ್ಸ್-ಸಿಸಿಎಂಬಿ ಮತ್ತು ಮೃಗಾಲಯಗಳಂತಹ ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಕೆಲಸ  ಮಾಡಬೇಕಾಗಿದೆ. ವನ್ಯಜೀವಿಗಳಲ್ಲಿ ಸಂತಾನೋತ್ಪತ್ತಿ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಅವರು ಸಂಶೋಧನೆಯಲ್ಲಿ ಪಾಲುದಾರರಾಗಿರಬೇಕು ಎಂದರು.

ಕೋವಿಡ್ 19 ನಂತಹ ಜೂನೋಟಿಕ್ ಕಾಯಿಲೆಗಳನ್ನು ಸೂಚಿಸುತ್ತಾ, ಪ್ರಾಣಿಗಳಿಂದ ಮನುಷ್ಯರಿಗೆ ಉದಯೋನ್ಮುಖ ಸಾಂಕ್ರಾಮಿಕ ರೋಗಗಳನ್ನು ಊಹಿಸಲು ಸಂಶೋಧಕರು ಮತ್ತು ಪ್ರಾಣಿಸಂಗ್ರಹಾಲಯಗಳು ತಮ್ಮ ಸಂಪನ್ಮೂಲಗಳನ್ನು ಮತ್ತು ಪರಿಣತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ಒತ್ತಿ  ಹೇಳಿದರು. ಇತ್ತೀಚೆಗೆ, ಕೇಂದ್ರ ಮೃಗಾಲಯ ಪ್ರಾಧಿಕಾರವು ಭಾರತದ ವಿವಿಧ ಭಾಗಗಳಿಂದ ಆರು ಮೃಗಾಲಯಗಳ ಒಕ್ಕೂಟವನ್ನು ರಚಿಸಿದೆ. 

ಲಾಕೋನೆಸ್-ಸಿಸಿಎಂಬಿಯ ವಿಜ್ಞಾನಿ ಉಸ್ತುವಾರಿ ಡಾ.ಕಾರ್ತಿಕೇಯನ್ ವಾಸುದೇವನ್ ಅವರು ಮಾತನಾಡ, “ನಮ್ಮಂತಹ ಸಂಶೋಧನಾ ಸಂಸ್ಥೆಯೊಂದಿಗೆ ಮೃಗಾಲಯಗಳನ್ನು ಒಟ್ಟುಗೂಡಿಸುವಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರವು ಪ್ರಮುಖ ಪಾತ್ರ ವಹಿಸಿದೆ. ಈ ಒಕ್ಕೂಟವು ಪ್ರಾಣಿಸಂಗ್ರಹಾಲಯಗಳು ಮತ್ತು  ಲಾಕೋನ್ಸ್‌ನಂತಹ ವನ್ಯಜೀವಿ ಸಂಶೋಧನಾ ಸಂಸ್ಥೆ ಹಂಚಿಕೆಯ ಗುರಿಗಳತ್ತ ಹೇಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತದೆ ಎಂಬುದಕ್ಕೆ ಉದಾಹರಣೆ ನೀಡಬೇಕೆಂದು ನಾವು ಬಯಸುತ್ತೇವೆ. ಲಾಕೋನ್ಸ್‌ನಲ್ಲಿರುವ ರಾಷ್ಟ್ರೀಯ ವನ್ಯಜೀವಿ ಆನುವಂಶಿಕ ಸಂಪನ್ಮೂಲ ಬ್ಯಾಂಕ್ ಭಾರತದ ಎಲ್ಲಾ ಪ್ರಾಣಿಸಂಗ್ರಹಾಲಯಗಳಿಂದ  ಜೈವಿಕ ಮಾದರಿಗಳ ಉಗ್ರಾಣವಾಗಬಹುದು. ಈ ಮಾದರಿಗಳನ್ನು ನಂತರ ಕೃತಕ ಗರ್ಭಧಾರಣೆಗೆ ಬಳಸಬಹುದು, ಆಧುನಿಕ ಜೈವಿಕ ತಂತ್ರಜ್ಞಾನ ಸಾಧನಗಳ ಮೂಲಕ ವೀರ್ಯ ಮತ್ತು ಆಸೈಟ್‌ಗಳನ್ನು ರಚಿಸಬಹುದು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ  ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com