social_icon

ಪೆಗಾಸಸ್ ಸ್ಪೈ ವೇರ್: 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್ ಹ್ಯಾಕ್; ಗೂಢಚರ್ಯೆ ಯತ್ನ?

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. 

Published: 19th July 2021 02:58 AM  |   Last Updated: 19th July 2021 03:03 AM   |  A+A-


For representational purposes (Express Illustrations)

ಹ್ಯಾಕಿಂಗ್ (ಸಾಂಕೇತಿಕ ಚಿತ್ರ)

The New Indian Express

ನವದೆಹಲಿ: ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 

ಟಾರ್ಗೆಟ್ ಪಟ್ಟಿಯಲ್ಲಿದ್ದ ಕೆಲವೊಂದು ಮೊಬೈಲ್ ಡಿವೈಸ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಅಸ್ತಿತ್ವವಿರುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ಸ್ಪಷ್ಟವಾಗಿದೆ ಎಂದು ದಿ ವೈರ್ ವರದಿ ಪ್ರಕಟಿಸಿದೆ. ಹಿಂದೂಸ್ಥಾನ್ ಟೈಮ್ಸ್, ದಿ ಹಿಂದು, ವೈರ್, ಇಂಡಿಯನ್ ಎಕ್ಸ್ ಪ್ರೆಸ್, ನ್ಯೂಸ್ 18, ಇಂಡಿಯಾ ಟುಡೆ, ಪಯೋನೀರ್, ಬರಹಗಾರರು, ಅಂಕಣಕಾರರು, ಪ್ರಾದೇಶಿಕ ಮಾಧ್ಯಮಗಳವರೂ ಟಾರ್ಗೆಟ್ ಲಿಸ್ಟ್ ನಲ್ಲಿದ್ದದ್ದು ಬೆಳಕಿಗೆ ಬಂದಿದೆ.

ಡೇಟಾದಲ್ಲಿರುವ ಫೋನ್ ನಂಬರ್ ಗಳೂ ಇರುವ ಒಂದೇ  ಕಾರಣದಿಂದ ಇದು ಡಿವೈಸ್ ಗಳಲ್ಲಿ ಪೆಗಾಸಸ್ ನ ಸ್ಪೈವೇರ್ ಇತ್ತೇ ಅಥವಾ ಕೇವಲ ಹ್ಯಾಕ್ ಯತ್ನಕ್ಕೆ ಪ್ರಯತ್ನಿಸಲಾಗಿತ್ತೇ ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. 

ಪತ್ರಕರ್ತರ ಮೇಲಿನ ಕಣ್ಗಾವಲಿನ ಸಾಧ್ಯತೆಗಳು ಹಾಗೂ ಸಂಭಾವ್ಯ ಟಾರ್ಗೆಟ್ ಗಳನ್ನು ಪೆಗಾಸಸ್ ಯೋಜನೆ ಸೂಚಿಸುತ್ತಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಒಕ್ಕೂಟ ವಿಶ್ಲೇಷಿಸಿದೆ. 

ದಿ ವೈರ್ ನ ಇಬ್ಬರು ಸಂಸ್ಥಾಪಕ ಸಂಪಾದಕರು, ರಾಜತಾಂತ್ರಿಕ ಸಂಪಾದಕರು ಹಾಗೂ ರೋಹಿಣಿ ಸಿಂಗ್ ಸೇರಿದಂತೆ ಸಂಸ್ಥೆಗೆ ನಿರಂತರವಾಗಿ ಬರೆಯುತ್ತಿದ್ದ ಇಬ್ಬರು ಲೇಖಕರ ಹೆಸರು ಪೆಗಾಸಸ್ ಹ್ಯಾಕ್ ಪಟ್ಟಿಯಲ್ಲಿದೆ. 

ರೋಹಿಣಿ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಅವರ ಉದ್ಯಮ ವ್ಯವಹಾರ, ಪ್ರಧಾನಿ ಮೋದಿ ಅವರಿಗೆ ನಿಕಟವಾಗಿರುವ ಉದ್ಯಮಿ ನಿಖಿಲ್ ಮರ್ಚೆಂಟ್ ಅವರ ಕುರಿತು ಹಾಗೂ ಕೇಂದ್ರ ಸಚಿವ ಪೀಯೂಷ್ ಗೋಯಲ್ ಉದ್ಯಮಿ ಅಜಯ್ ಪಿರಮಾಲ್ ಅವರೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೇಖನ ಬರೆದ ನಂತರ ಆಕೆಯ ಫೋನ್ ನಂಬರ್ ಪೆಗಾಸಸ್ ಗೆ ಸಂಬಂಧಿಸಿದ ಪಟ್ಟಿಯಲ್ಲಿತ್ತು ಎಂದು ದಿ ವೈರ್ ಹೇಳಿದೆ. 

ಇನ್ನು ರಾಫೆಲ್ ಒಪ್ಪಂದದ ಕುರಿತ ಲೇಖನಗಳಿಗೆ ಕೆಲಸ ಮಾಡುತ್ತಿದ್ದ ಇಂಡಿಯನ್ ಎಕ್ಸ್ ಪ್ರೆಸ್ ನ ಪತ್ರಕರ್ತ ಸುಶಾಂತ್ ಸಿಂಗ್ ಅವರ ಹೆಸರೂ ಸಹ 2018 ರ ಮಧ್ಯಭಾಗದಲ್ಲಿ ಪಟ್ಟಿಯಲ್ಲಿತ್ತು. ಸಿಂಗ್ ಅವರ ಈಗಿನ ಫೋನ್ ಪೆಹಾಸಸ್ ಸ್ಪೈವೇರ್ ಗೆ ಒಳಪಟ್ಟಿದೆ ಎಂಬ ಮಾಹಿತಿ ಡಿಜಿಟಲ್ ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ದೃಢಪಟ್ಟಿದೆ. 

ದಿ ವೈರ್ ಪ್ರಕಟಿಸಿರುವ ವರದಿಯ ಪ್ರಕಾರ ಪತ್ರಕರ್ತರಷ್ಟೇ ಅಲ್ಲದೇ ರಾಜಕೀಯ ನಾಯಕರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ವಿಜ್ಞಾನಿಗಳ ಮೊಬೈಲ್ ಗಳೂ ಹ್ಯಾಕ್ ಆಗಿವೆ. 


Stay up to date on all the latest ದೇಶ news
Poll
rahul-gandhi

ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆ; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಇದರಿಂದ...


Result
ಕಾಂಗ್ರೆಸ್ ಗೆ ಹಿನ್ನಡೆ
ಕಾಂಗ್ರೆಸ್ ಗೆ ಪ್ರಯೋಜನ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp