ಸ್ವಾತಂತ್ರ್ಯ ನಂತರದ ಭಾರತದ ಅತೀ ದೊಡ್ಡ, ಭೀಕರ ಸವಾಲು ಕೊರೋನಾ: ರಘುರಾಮ್ ರಾಜನ್

ದೇಶದ ಸ್ವಾತಂತ್ರ ನಂತರ ಇದೇ ಮೊದಲ ಬಾರಿಗೆ ಕಂಡರಿಯದ ಭೀಕರ ಸವಾಲುಗಳನ್ನು ದೇಶ ಎದುರಿಸುತ್ತಿದೆ ಎಂದು ಹೆಸರಾಂತ ಆರ್ಥಿಕ ತಜ್ಞ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್

ನವದೆಹಲಿ: ದೇಶದ ಸ್ವಾತಂತ್ರ ನಂತರ ಇದೇ ಮೊದಲ ಬಾರಿಗೆ ಕಂಡರಿಯದ ಭೀಕರ ಸವಾಲುಗಳನ್ನು ದೇಶ ಎದುರಿಸುತ್ತಿದೆ ಎಂದು ಹೆಸರಾಂತ ಆರ್ಥಿಕ ತಜ್ಞ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಚಿಕಾಗೋ ವಿದ್ಯಾಲಯ ದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನ್, ಅನೇಕ ಕಡೆ ಕೊರೋನಾ ರೋಗಿಗಳು ಕನಿಷ್ಠ ಚಿಕಿತ್ಸೆ ಸೌಲಭ್ಯ ಇಲ್ಲದೆ ಒದ್ದಾಡುತ್ತಿದ್ದಾರೆ ಅಂತಹವರ ಪಾಲಿಗೆ ಸರ್ಕಾರ ಇಲ್ಲವೇ ಇಲ್ಲ ಎಂಬ ಭಾವನೆ ಬಂದಿದ್ದರೆ ಅದು ಸಹಜವೇ ಅಗಿದೆ ಎಂದರು. ಕೊರೋನ ದಿನದಿಂದ  ದಿನಕ್ಕೆ ಹೆಚ್ಚಾಗುತ್ತಿದೆ . ಕಳೆದ 8 – 10 ದಿನಗಳಿಂದ ಪ್ರತಿದಿನ ಮೂರರಿಂದ 4 ಲಕ್ಷ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮವಾಗಿ ಪ್ರತಿನಿತ್ಯ 3 ರಿಂದ 4ಸಾವಿರ ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್  ಹೇಳಿದ್ದಾರೆ.

ದೆಹಲಿಯ ಚಿಕಾಗೊ ವಿಶ್ವವಿದ್ಯಾಲಯದ ಪರವಾಗಿ ನಿನ್ನೆ (ಶನಿವಾರ) ವಿಶೇಷ ವಿಡಿಯೋ ಕಾನ್ಫರೆನ್ಸ್ ನಡೆಯಿತು. ಭಾರತದ ಉನ್ನತ ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದ ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಘುರಾಮ್ ರಾಜನ್  ಭಾಗವಹಿಸಿದ್ದರು. ರಘುರಾಮ್ ರಾಜನ್ ಅವರು ಹೆಚ್ಚುತ್ತಿರುವ ಕರೋನಾ ಸಾಂಕ್ರಾಮಿಕ ಮತ್ತು ಭಾರತೀಯ ಆರ್ಥಿಕತೆಯ ಬಗ್ಗೆ ಮಾತನಾಡಿದರು.

'ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಸರ್ಕಾರ ಎದುರಿಸುತ್ತಿರುವ ದೊಡ್ಡ ಸವಾಲು ಕೋವಿಡ್-19 ಸಾಂಕ್ರಾಮಿಕ ರೋಗವಾಗಿದೆ. ಸಾಂಕ್ರಾಮಿಕದಿಂದಾಗಿ ದೇಶದ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕ್ಷೇತ್ರಗಳ ಬಹುತೇಕ ಸಂಸ್ಥೆಗಳು ದಿವಾಳಿತನದತ್ತ ಸಾಗಿವೆ. ಭಾರತವು ಸಂದಿಗ್ಧತೆಯನ್ನು ಎದುರಿಸುತ್ತಿದೆ.  ಭಾರತದಲ್ಲಿ ದಿನಕ್ಕೆ ಸರಾಸರಿ 3 ಲಕ್ಷ ಜನರಲ್ಲಿ ಕೊರೋನಾ ಸೋಂಕು ವರದಿಯಾಗುತ್ತಿದೆ. ಸಾವಿನ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ಕೊರೋನಾ ಅವಧಿಯಲ್ಲಿ ವಿವಿಧ ಕಾರಣಗಳಿಗಾಗಿ ಜನರಿಗೆ ಸಹಾಯ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇದು ಕೂಡ ಒಂದು ರೀತಿಯ ಕೊರೋನಾ ಪರಿಣಾಮ ಎಂದು ನಾನು  ಹೇಳಬಯಸುತ್ತೇನೆ.

'ಕೊರೋನಾ ಹಾನಿಯನ್ನು ತಡೆಗಟ್ಟಲು ಸರ್ಕಾರಗಳು ಜಾರಿಗೆ ತಂದಿರುವ ಲಾಕ್‌ಡೌನ್‌ಗಳಿಂದಾಗಿ ಭಾರತ ಮತ್ತೊಮ್ಮೆ ದೊಡ್ಡ ಆರ್ಥಿಕ ಸವಾಲನ್ನು ಎದುರಿಸುತ್ತಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಇದ್ದರೂ, ಮಹಾರಾಷ್ಟ್ರ ಸರ್ಕಾರವು ರೋಗಿಗಳಿಗೆ ಆಮ್ಲಜನಕ ಹಾಸಿಗೆಗಳ  ಉತ್ತಮ ನಿರ್ವಹಣೆಯನ್ನು ಒದಗಿಸುತ್ತಿದೆ. ಅನೇಕ ಸ್ಥಳಗಳಲ್ಲಿ ಸರ್ಕಾರಗಳು ಒಂದು ನಿರ್ದಿಷ್ಟ ಮಟ್ಟವನ್ನು ಮೀರಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿವೆ. ಸುಧಾರಣೆಯು ಪಾರದರ್ಶಕವಾಗಿರಬೇಕು, ಸೂಚ್ಯವಾಗಿರಬಾರದು ಎಂದು ಅವರು ಹೇಳಿದರು. 

ಪ್ರಸ್ತುತ ದೆಹಲಿ ಚಿಕಾಗೊ ಬೂತ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com