ಬಿಹಾರ: ನಾಲ್ವರನ್ನು ಹತ್ಯೆ ಮಾಡಿ ಬಾಂಬ್ ನಿಂದ ಮನೆ ಸ್ಫೋಟಿಸಿದ ನಕ್ಸಲರು!

ಬಿಹಾರದಲ್ಲಿ ನಕ್ಸಲರು ಬೀಭತ್ಸ ಕೃತ್ಯ ನಡೆಸಿದ್ದಾರೆ. ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಲ್ಲದೆ, ಅವರಿದ್ದ ಮನೆಗಳನ್ನು ಸ್ಫೋಟಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಯಾ: ಬಿಹಾರದಲ್ಲಿ ನಕ್ಸಲರು ಬೀಭತ್ಸ ಕೃತ್ಯ ನಡೆಸಿದ್ದಾರೆ. ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಲ್ಲದೆ, ಅವರಿದ್ದ ಮನೆಗಳನ್ನು ಸ್ಫೋಟಿಸಿರುವ ಘಟನೆ ನಡೆದಿದೆ.

ಗಯಾ ಜಿಲ್ಲೆಯಲ್ಲಿನ ದುಮಾರಿಯಾ ಬ್ಲಾಕ್ ನ ಮೌನ್ ಬಾರ್ ಗ್ರಾಮದಲ್ಲಿ ಮಾವೋವಾದಿಗಳು ಈ ಕೃತ್ಯ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಮೌನ್ ಬಾರ್ ಗ್ರಾಮದ ನಿವಾಸಿಯಾಗಿರುವ ಸರ್ಜು ಸಿಂಗ್ ಅವರ ಮನೆ ಬಾಂಬ್ ನಿಂದ ಸ್ಫೋಟಿಸಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಗಂಡ-ಹೆಂಡತಿ ಸೇರಿದಂತೆ ನಾಲ್ವರನ್ನು ನೇಣಿಗೇರಿಸಿರುವುದಾಗಿ ತಿಳಿದುಬಂದಿದೆ.

ಸರ್ಜು ಸಿಂಗ್ ಸೇರಿದಂತೆ ಸತ್ಯೇಂದ್ರ ಸಿಂಗ್, ಮಹೇಂದ್ರ ಸಿಂಗ್, ಮನೋರಮಾ ದೇವಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಈ ಹತ್ಯೆಯ ನಂತರ ನಕ್ಸಲೀಯರು ಗ್ರಾಮದಲ್ಲಿ ಪೋಸ್ಟರ್ ಅಂಟಿಸಿದ್ದು, "ಈ ಕುಟುಂಬದ ಸದಸ್ಯರು ನಾಲ್ವರು ನಕ್ಸಲೀಯರ ಹತ್ಯೆಗೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕಾರ ತೀರಿಸಿಕೊಂಡಿರುವುದಾಗಿ" ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com