ತಮಿಳುನಾಡು: ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

ಅಜ್ಜಿಯೋರ್ವಳು ತನ್ನ ಮೂರು ತಿಂಗಳ ಮೊಮ್ಮಗನನ್ನೇ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ. ಅಲ್ಲದೆ ಮತ್ತೊಂದು ಮಗುವಿನ ಹತ್ಯೆಗೂ ಯತ್ನಿಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಯಮತ್ತೂರು: ಅಜ್ಜಿಯೋರ್ವಳು ತನ್ನ ಮೂರು ತಿಂಗಳ ಮೊಮ್ಮಗನನ್ನೇ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ. ಅಲ್ಲದೆ ಮತ್ತೊಂದು ಮಗುವಿನ ಹತ್ಯೆಗೂ ಯತ್ನಿಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಕುಂದಂಪಾಳ್ಯಂ ಮೂಲದ ಭಾಸ್ಕರನ್ ಹಾಗೂ ಐಶ್ವರ್ಯ ಎಂಬ ದಂಪತಿ ಮೂರು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅಜ್ಜಿಯನ್ನು ಮಧುರೈಯಿಂದ ಕರೆದುಕೊಂಡು ಬಂದಿದ್ದರು.

ಅಕ್ಟೋಬರ್​ 21 ರಂದು ಐಶ್ವರ್ಯ ಅಂಗಡಿಗೆ ಹೋಗಿದ್ದ ವೇಳೆ ಐಶ್ವರ್ಯ ತಾಯಿ ಶಾಂತಿ ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾಳೆ. ಹಾಗೆ ಮತ್ತೊಂದು ಮಗುವನ್ನೂ ಕೂಡ ಹತ್ಯೆ ಮಾಡಲು ಮುಂದಾದಾಗ ಆ ಕ್ಷಣಕ್ಕೆ ಯಾರೋ ಬಾಗಿಲು ಬಡಿದಂತಾಗಿದೆ. ಹೆದರಿದ ಅಜ್ಜಿ ಅಲ್ಲಿಂದ ಓಡಿಹೋಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಡು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊಲೆ ಮಾಡಿದ ಅಜ್ಜಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com