ಮಾಸ್ಕ್ ಧರಿಸದ ಸೈನಿಕನಿಗೆ ಥಳಿತ: ಮೂವರು ಪೊಲೀಸರು ಅಮಾನತು

ವಿಡಿಯೋದಲ್ಲಿ ಪೊಲೀಸರು ಸೈನಿಕನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಬಿಗಿಯುವುದು ಕಂಡು ಬಂದಿತ್ತು.
ಥಳಿತಕ್ಕೊಳಗಾದ ಸೈನಿಕ ಪವನ್ ಕುಮಾರ್ ಯಾದವ್
ಥಳಿತಕ್ಕೊಳಗಾದ ಸೈನಿಕ ಪವನ್ ಕುಮಾರ್ ಯಾದವ್

ರಾಂಚಿ: ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ಮೂವರು ಪೊಲೀಸರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನೊಬ್ಬನನ್ನು ಥಳಿಸಿದ್ದರು. ಜಾರ್ಖಂಡ್ ನ ಚತ್ರ ಎಂಬಲ್ಲಿ ನಡೆದಿದ್ದ ಈ ಘಟನೆಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. 

ವಿಡಿಯೋದಲ್ಲಿ ಪೊಲೀಸರು ಸೈನಿಕ ಪವನ್ ಕುಮಾರ್ ಯಾದವ್ ನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಬಿಗಿಯುವುದು ಕಂಡು ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಪೊಲೀಸ್ ಇಲಾಖೆ ಸೈನಿಕನನ್ನು ಥಳಿಸಿದ್ದ ಮೂವರು ಪೊಲೀಸರನ್ನು ಅಮಾನತುಗೊಳಿಸಿದೆ. ಥಳಿತಕ್ಕೊಳಗಾದ ಸೈನಿಕ ಬೈಕಿನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದು, ಪೊಲೀಸರು ತಡೆದು ವಿಚಾರಣೆ ನಾಡೆಸಿದಾಗ ಆತ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಎಸ್ ಪಿ ಘಟನೆ ಕುರಿತು ವರದಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com