3 ಹಸುಳೆ ಸೇರಿ 19 ಮಂದಿ ಬಲಿ ಪಡೆದಿದ್ದ ವಿಮಾನ ಅಪಘಾತಕ್ಕೆ ಮಬ್ಬು, ವಿಂಡ್ ಶೀಲ್ಡ್ ವೈಪರ್ ಕಾರಣ

ಕಳೆದ ವರ್ಷ ಆಗಸ್ಟ್ 7 ರಂದು ದುಬೈಯಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು.
ಘಟನೆಯ ದೃಶ್ಯ
ಘಟನೆಯ ದೃಶ್ಯ

ನವದೆಹಲಿ: ಕಳೆದ ವರ್ಷ ಕೋಝಿಕ್ಕೊಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ್ದ ವಿಮಾನ ಅಪಘಾತಕ್ಕೆ ಮುಂಭಾಗದ ಮಬ್ಬಾಗಿದ್ದ ವಿಂಡ್ ಶೀಲ್ಡ್ ಕಾರಣ ಎಂಬುದು ತನಿಖಾವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ ಅಪಘಾತದ ತನಿಖಾ ವರದಿಯನ್ನು ಸಲ್ಲಿಸಿದೆ. 

ಕಳೆದ ವರ್ಷ ಆಗಸ್ಟ್ 7 ರಂದು ದುಬೈಯಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು. ಅವಘಡದಲ್ಲಿ ಒಟ್ಟು 19 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 3 ಹಸುಳೆಗಳೂ ಸೇರಿದ್ದವು.

ಟೇಬಲ್ ಟಾಪ್ ವಿಮಾನ ನಿಲ್ದಾಣವಾದ ಕೋಝಿಕ್ಕೋಡ್ ಏರ್ ಪೋರ್ಟ್ ನಲ್ಲಿ ವಿಮಾನ ಇಳಿಸುವ ವೇಳೆ ನತದೃಷ್ಟ ವಿಮಾನದ ವಿಂಡ್ ಶೀಲ್ಡ್ ಮಬ್ಬಾಗಿತ್ತು. ಇದರಿಂದ ಚಾಲಕನಿಗೆ ಎದುರಿನ ದೃಶ್ಯ ಚೆನ್ನಾಗಿ ಕಾಣಿಸಿರಲಿಲ್ಲ ಎಂಬುದು ತನಿಖೆ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com