ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ, ತಮಗೆ ದೊರೆತಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜಿನಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹರಾಜಿನಿಂದ ದೊರೆಯುವ ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಬಳಸಲಾಗುವುದು ಎಂದಿದ್ದಾರೆ.
2014ರ ಜೂನ್ ನಲ್ಲಿ, ಕೇಂದ್ರ ಸರ್ಕಾರ ಗಂಗಾ ನದಿ ಮತ್ತು ಅದರ ಉಪನದಿಗಳ ಸಂರಕ್ಷಣೆ ಮತ್ತು ಕಾಯಕಲ್ಪದ ಉದ್ದೇಶದಿಂದ 'ನಮಾಮಿ ಗಂಗೆ ಕಾರ್ಯಕ್ರಮ' ಆರಂಭಿಸಿತು.
ಟೋಕಿಯೊ ಒಲಂಪಿಕ್ಸ್ ಮತ್ತು ಟೊಕಿಯೋ ಪ್ಯಾರಾಲಿಂಪಿಕ್ಸ್ ವಿಜೇತರಿಂದ ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಬಹುತೇಕ ಉಡುಗೊರೆ, ಸ್ಮರಣಿಕೆಗಳನ್ನು ಕೂಡಾ ಹರಾಜಿಲ್ಲಿ ಇರಲಿವೆ.
Advertisement