ಶಾಲಾ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಶಿಕ್ಷಕ ಪೊಲೀಸರಿಗೆ ಶರಣು ಇನ್ ಸ್ಟಾಗ್ರಾಂನಲ್ಲಿ ಸಿಕ್ಕ ಅನೈತಿಕ ಸಾಕ್ಷ್ಯ
ಕಾಸರಗೋಡು: ಕಾಸರಗೋಡಿನ ಮೆಲ್ ಪರಂಬಾ ಎಂಬಲ್ಲಿ 13 ವರ್ಷದ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾಗಿ ಶಿಕ್ಷನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಶಿಕ್ಷಕ ಉಸ್ಮಾನ್ ಇದೀಗ ಪೊಲೀಸರಿಗೆ ಶರಣಾಗಿದ್ದಾನೆ.
ಶಿಕ್ಷಕ ಉಸ್ಮಾನ್ ಮೃತ ಶಾಲಾ ಬಾಲಕಿ ಜೊತೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಆತ ಸ ಅದಿಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತಿದ್ದ. ಆತ ಮತ್ತು ಮೃತ ಶಾಲ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು.
೮ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸೆ.7ರಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಂತರ ಬಾಲಕಿ ತಂದೆ ತಮ್ಮ ಮಗಳ ಜೊತೆ ಉಸ್ಮಾನ್ ಅನೈತಿಕವಾಗಿ ಚ್ಯಾಟ್ ಮಾಡಿದ್ದಾಗಿ ಆರೋಪಿಸಿದ್ದರು.
ಬಾಲಕಿಯ ಇನ್ ಸ್ಟಾಗ್ರಾಂ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಆಕೆ ಉಸ್ಮಾನ್ ಜೊತೆ ಚ್ಯಾಟ್ ಮಾಡಿರುವುದು ತಿಳಿದುಬಂದಿತ್ತು. ಆರೋಪಿ ಮೇಲೆ ಲೈಂಗಿಕ ದೌರ್ಜನ್ಯ, ಆತ್ಮಹತ್ಯೆಗೆ ಪ್ರಚೋದನೆ ಮುಂತಾದ ಪ್ರಕರಣ ದಾಖಲಿಸಿಕೊಳ್ಲಲಾಗಿದೆ. ಆರೋಪಿ ಪರ ವಕೀಲರು ಉಸ್ಮಾನ್ ಆ ಬಾಲಕಿಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ, ಆಕೆಗೆ ಪಾಠ ಮಾಡಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ