ಉತ್ತರ ಪ್ರದೇಶ, ದೆಹಲಿಯಾದ್ಯಂತ ದಟ್ಟ ಮಂಜು, ಶೀತಗಾಳಿ: ರೈಲು, ರಸ್ತೆ ಸಂಚಾರದಲ್ಲಿ ವ್ಯತ್ಯಯ

ದೆಹಲಿಯ ಕೆಲವು ಭಾಗಗಳಲ್ಲಿ ಸೋಮವಾರ ನಸುಕಿನ ಜಾವದಿಂದಲೇ ತಣ್ಣನೆಯ ಗಾಳಿ ಬೀಸುತ್ತಿದ್ದು, ದಟ್ಟವಾದ ಮಂಜು ನಗರದ ಹಲವು ಪ್ರದೇಶಗಳಲ್ಲಿ ಇದೆ. ಇದು ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. 
ತೀವ್ರ ಚಳಿಗೆ ಮುಂಜಾನೆ ಬೆಂಕಿಯ ಸುತ್ತ ಕುಳಿತು ಬಿಸಿ ಕಾಯಿಸಿಕೊಳ್ಳುತ್ತಿರುವ ಜನರು
ತೀವ್ರ ಚಳಿಗೆ ಮುಂಜಾನೆ ಬೆಂಕಿಯ ಸುತ್ತ ಕುಳಿತು ಬಿಸಿ ಕಾಯಿಸಿಕೊಳ್ಳುತ್ತಿರುವ ಜನರು
Updated on

ನವದೆಹಲಿ: ದೆಹಲಿಯ ಕೆಲವು ಭಾಗಗಳಲ್ಲಿ ಸೋಮವಾರ ನಸುಕಿನ ಜಾವದಿಂದಲೇ ತಣ್ಣನೆಯ ಗಾಳಿ ಬೀಸುತ್ತಿದ್ದು, ದಟ್ಟವಾದ ಮಂಜು ನಗರದ ಹಲವು ಪ್ರದೇಶಗಳಲ್ಲಿ ಇದೆ. ಇದು ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. 

ಹತ್ತು ರೈಲುಗಳು 1:45 ರಿಂದ 3:30 ಗಂಟೆಗಳವರೆಗೆ ತಡವಾಗಿ ಓಡುತ್ತಿವೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಕನಿಷ್ಠ 5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ಗರಿಷ್ಠ ತಾಪಮಾನವು ಸುಮಾರು 19 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಹವಾಮಾನ ಕಚೇರಿಯ ಪ್ರಕಾರ, ಶೀತ ದಿನವೆಂದರೆ ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಅಥವಾ ಸಮನಾಗಿರುತ್ತದೆ ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 4.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುತ್ತದೆ.
ಭಾನುವಾರದಂದು ಸಫ್ದರ್‌ಜಂಗ್‌ನಲ್ಲಿ ಗರಿಷ್ಠ ತಾಪಮಾನವು 16.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಐದು ಹಂತಗಳಿಗಿಂತ ಕಡಿಮೆಯಾಗಿದ್ದು, ಈ ಋತುವಿನಲ್ಲಿ ಇದುವರೆಗೆ ಕಡಿಮೆಯಾಗಿದೆ. ರಿಡ್ಜ್ ಪ್ರದೇಶದಲ್ಲಿ 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ, ಇದು ಸಾಮಾನ್ಯಕ್ಕಿಂತ 4.9 ಡಿಗ್ರಿ ಕಡಿಮೆಯಾಗಿದೆ, ಇದು ರಾಜಧಾನಿಯ ಅತ್ಯಂತ ಶೀತ ಸ್ಥಳವಾಗಿದೆ.

ಸೋಮವಾರ, ರಿಡ್ಜ್ ಮತ್ತು ಅಯನಗರ್ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 4 ಡಿಗ್ರಿ ಸೆಲ್ಸಿಯಸ್ ಮತ್ತು 4.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಸೋಮವಾರದಂದು ರಾಷ್ಟ್ರೀಯ ರಾಜಧಾನಿ ಪ್ರದೇಶ, ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿದಿತ್ತು.

ಪಂಜಾಬ್‌ನ ಬಟಿಂಡಾ ಮತ್ತು ರಾಜಸ್ಥಾನದ ಬಿಕಾನೇರ್‌ನಲ್ಲಿ ಶೂನ್ಯ ಗೋಚರತೆಯನ್ನು ವರದಿ ಮಾಡಿದರೆ, ಅಂಬಾಲಾ, ಹಿಸಾರ್, ಅಮೃತಸರ, ಪಟಿಯಾಲ, ಗಂಗಾನಗರ್, ಚುರು ಮತ್ತು ಬರೇಲಿಯಲ್ಲಿ ಇದು 50 ಮೀಟರ್ ಮತ್ತು ಅದಕ್ಕಿಂತ ಕೆಳಕ್ಕೆ ಇಳಿದಿದೆ.
ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಮಂಜಿನ ಪರಿಸ್ಥಿತಿಗಳು ಇರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಉತ್ತರ ಪ್ರದೇಶದಲ್ಲಿಯೂ ದಟ್ಟ ಮಂಜು: ದಟ್ಟವಾದ ಮಂಜು ಮೊರಾದಾಬಾದ್‌ನ ಕೆಲವು ಭಾಗಗಳನ್ನು ಆವರಿಸಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ ಕಾಣದಷ್ಟು ಕಡಿಮೆಯಾಗಿದೆ. ಮೊರಾದಾಬಾದ್ ಕನಿಷ್ಠ ತಾಪಮಾನ 7 ° C ಮತ್ತು ಗರಿಷ್ಠ ತಾಪಮಾನ 18 ° C ಇದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಂದು ಮಂಜು ಮತ್ತು ಶೀತ ಅಲೆಯ ವಾತಾವರಣವಿದೆ. ಈ ವಾರ ಪೂರ್ತಿ ಇದೇ ರೀತಿ ಮಂಜು ಪರಿಸ್ಥಿತಿ ಇರಬಹುದು ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com