ಬೋಧಗಯಾ: ಅಗತ್ಯವಿರುವ ಜನರಿಗಾಗಿ ಯಾವಾಗಲೂ ಕೆಲಸ ಮಾಡಿ. ಒಬ್ಬ ವ್ಯಕ್ತಿಯು ನಂಬಿಕೆಯುಳ್ಳವನಾಗಿದ್ದರೆ ಆತ ಇತರರ ಬಗ್ಗೆ ಯೋಚಿಸಬೇಕು ಎಂದು ಟಿಬೆಟ್ನ ಧರ್ಮಗುರು ದಲೈಲಾಮ ಅವರು ಗುರುವಾರ ಹೇಳಿದರು.
ಬಿಹಾರದ ಬೋಧಗಯಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ದಲೈಲಾಮಾ, ತನ್ನಲ್ಲಿ ಕೋಪವನ್ನು ಕೆರಳಿಸುವವರ ವಿರುದ್ಧ ಯಾವುದೇ ದುರುದ್ಧೇಶವಿಲ್ಲ ಎಂದು ಹೇಳಿದರು.
'ನೀವು ನಂಬಿಕೆಯುಳ್ಳವರಾಗಿದ್ದರೆ, ನೀವು ಇತರರ ಬಗ್ಗೆ ಯೋಚಿಸಬೇಕು. ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸಿದರೆ, ಅದನ್ನು ನಿಮ್ಮಿಂದ ನಿರೀಕ್ಷಿಸಿರುವುದಿಲ್ಲ. ಯಾವಾಗಲೂ ಅಗತ್ಯವಿರುವವರಿಗಾಗಿಯೇ ಕೆಲಸ ಮಾಡಿ' ಎಂದು ಅವರು ಹೇಳಿದರು.
'ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಮತ್ತು ನಾನು ಎಲ್ಲೇ ಇದ್ದರೂ, ನಾನು ಮಾನವೀಯತೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ' ಎಂದು ಅವರು ಹೇಳಿದರು.
Advertisement