ಮಾಜಿ ಕೇಂದ್ರ ಸಚಿವ ಪಾಸ್ವಾನ್ ಅವರಿದ್ದ ಸರ್ಕಾರಿ ಬಂಗಲೆ ಈಗ ಮಾಜಿ ರಾಷ್ಟ್ರಪತಿ ಕೋವಿಂದ್ ಅಧಿಕೃತ ನಿವಾಸ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ, ತಮ್ಮ ಅಧಿಕೃತ ನಿವಾಸವನ್ನು ಜನಪತ್ ನ ಬಂಗಲೆಗೆ ವರ್ಗಾಯಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
Updated on

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ, ತಮ್ಮ ಅಧಿಕೃತ ನಿವಾಸವನ್ನು ಜನಪತ್ ನ ಬಂಗಲೆಗೆ ವರ್ಗಾಯಿಸಿದ್ದಾರೆ.
 
ಜನಪಥ್ ನಲ್ಲಿ ಈ ಹಿಂದೆ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿದ್ದ ಬಂಗಲೆಯಲ್ಲಿ ಇನ್ನು ಮುಂದೆ  ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಾಸವಿರಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಅಧಿಕಾರ ಹಸ್ತಾಂತರಿಸಿದ ಬಳಿಕ ಕೋವಿಂದ್ ತಮ್ಮ ಹೊಸ ನಿವಾಸಕ್ಕೆ ಪ್ರವೇಶಿಸಿದ್ದು, ಈ ಬಂಗಲೆಯಲ್ಲಿ 12 ಪಾಸ್ವಾನ್ ಮೂರು ದಶಕಗಳ ಕಾಲ ವಾಸವಿದ್ದರು. 

ಈ ಬಂಗಲೆಯನ್ನು ಖಾಲಿ ಮಾಡುವಂತೆ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಗೆ ನೊಟೀಸ್ ಜಾರಿಗೊಳಿಸಿದ ಬಳಿಕ ಏಪ್ರಿಲ್ ನಲ್ಲಿ ಬಂಗಲೆ ಖಾಲಿಯಾಗಿತ್ತು. ಬಳಿಕ ಅದನ್ನು ಮಾಜಿ ರಾಷ್ಟ್ರಪತಿಗಳ ವಾಸ್ತವ್ಯಕ್ಕೆ ಸಿದ್ಧಪಡಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com