ಓವೈಸಿ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿ ಗಾಜು ಜಖಂ!

ಗುಜರಾತಿನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೆ ಭಾರತ್ ಎಕ್ಸ್ ಪ್ರೆಸ್ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ರೈಲಿನಲ್ಲಿರುವ ಅಸಾದುದ್ದೀನ್ ಓವೈಸಿ
ರೈಲಿನಲ್ಲಿರುವ ಅಸಾದುದ್ದೀನ್ ಓವೈಸಿ
Updated on

ಅಹಮದಾಬಾದ್: ಗುಜರಾತಿನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೆ ಭಾರತ್ ಎಕ್ಸ್ ಪ್ರೆಸ್ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಇದರಿದಾಗಿ ಅಸಾದುದ್ದೀನ್ ಓವೈಸಿ ಕುಳಿತಿದ್ದ ಸೀಟಿನ ಪಕ್ಕದ ಕಿಟಕಿಯ ಗಾಜು ಮುರಿದಿರುವುದಾಗಿ ಪಕ್ಷದ ಮುಖಂಡ ವಾರಿಸ್ ಪಠಾಣ್ ತಿಳಿಸಿದ್ದಾರೆ. 

ಅಸಾದುದ್ದೀನ್ ಓವೈಸಿ, ಗುಜರಾತಿನ ಎಐಎಂಐಎಂ ಪಕ್ಷದ ಅಧ್ಯಕ್ಷ ಸಬೀರ್ ಕಬ್ಲಿವಾಲಾ ಮತ್ತಿತರ ಪಕ್ಷದ ಮುಖಂಡರು ಅಹಮದಾಬಾದ್ ನಿಂದ ಸೂರತ್ ಗೆ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. 

ರೈಲಿನ ಕಿಟಕಿ ಗಾಜು ಜಖಂವಾಗಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪಠಾಣ್, ಸೋಮವಾರ ಸಂಜೆ ಅಸಾದುದ್ದೀನ್ ಓವೈಸಿ, ಸಬೀರ್ ಕಬ್ಲಿವಾಲಾ ಮತ್ತು ಪಕ್ಷದ ಇತರ ರಾಷ್ಟ್ರಮಟ್ಟದ ಮುಖಂಡರೊಂದಿಗೆ ಅಹಮದಾಬಾದ್ ನಿಂದ ಸೂರತ್ ಗೆ ತೆರಳುತ್ತಿರುವಾಗ ಕೆಲವು ಜನರು ರೈಲಿನ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಕಿಟಕಿ ಗಾಜನ್ನು ಜಖಂಗೊಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com