ಹಳಿಗಳ ಮೇಲೆ ರೈಲು ಡಿಕ್ಕಿ ಹೊಡೆದು ಜಾನುವಾರುಗಳ ಸಾವು: ಆವರಣ ಗೋಡೆ ನಿರ್ಮಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ

ವಂದೇ ಭಾರತ್ ರೈಲಿನಡಿಗೆ ಸಿಲುಕಿ ದನಕರುಗಳು ಇತ್ತೀಚೆಗೆ ಸಾವಿಗೀಡಾಗಿರುವ ಘಟನೆಗಳು ನಡೆದಿತ್ತು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ರೈಲು ಮಾರ್ಗದ ಪಕ್ಕದಲ್ಲಿ 1 ಸಾವಿರ ಕಿಲೋ ಮೀಟರ್ ವರೆಗೆ ಮುಂದಿನ ಆರು ತಿಂಗಳುಗಳಲ್ಲಿ ಆವರಣ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ. 
ಜಾನುವಾರಿಗೆ ಡಿಕ್ಕಿ ಹೊಡೆದು ಹಾನಿಗೀಡಾದ ವಂದೇ ಭಾರತ್ ಎಕ್ಸ್ ಪ್ರೆಸ್
ಜಾನುವಾರಿಗೆ ಡಿಕ್ಕಿ ಹೊಡೆದು ಹಾನಿಗೀಡಾದ ವಂದೇ ಭಾರತ್ ಎಕ್ಸ್ ಪ್ರೆಸ್
Updated on

ನವದೆಹಲಿ: ವಂದೇ ಭಾರತ್ ರೈಲಿನಡಿಗೆ ಸಿಲುಕಿ ದನಕರುಗಳು ಇತ್ತೀಚೆಗೆ ಸಾವಿಗೀಡಾಗಿರುವ ಘಟನೆಗಳು ನಡೆದಿತ್ತು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ರೈಲು ಮಾರ್ಗದ ಪಕ್ಕದಲ್ಲಿ 1 ಸಾವಿರ ಕಿಲೋ ಮೀಟರ್ ವರೆಗೆ ಮುಂದಿನ ಆರು ತಿಂಗಳುಗಳಲ್ಲಿ ಆವರಣ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ. 

ರೈಲು ಆವರಣ ತಡೆಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದ್ದಾರೆ. 

ರೈಲ್ವೆ ಸಚಿವಾಲಯ ಅಂಕಿಅಂಶ ಪ್ರಕಾರ, ಈ ವರ್ಷ ಜಾನುವಾರು ಅಥವಾ ಮನುಷ್ಯರು ಹಳಿಗಳ ಮೇಲೆ ಬಂದು ಇಲಾಖೆಗೆ ಉಂಟಾದ ನಷ್ಟಗಳು ಹೆಚ್ಚಾಗಿವೆ. 2022ರ ಹಣಕಾಸು ವರ್ಷದಲ್ಲಿ 2,115 ರೈಲು ನಷ್ಟ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 2,650 ಪ್ರಕರಣ ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 26 ಸಾವಿರ ಜಾನುವಾರುಗಳು ಅಡ್ಡ ಬಂದ ಪ್ರಕರಣಗಳು ವರದಿಯಾಗಿವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com