ಮುಂಬೈ: ಮುಂಬೈಯಲ್ಲಿರುವ ಮಂತ್ರಾಲಯ ಕಚೇರಿಯ ( ಮಹಾರಾಷ್ಟ್ರ ಸರ್ಕಾರದ ಆಡಳಿತ ಕಚೇರಿ) ಆರನೇ ಮಹಡಿಯಿಂದ ವ್ಯಕ್ತಿಯೊಬ್ಬ ಗುರುವಾರ ಜಿಗಿದಿದ್ದಾನೆ. ನಂತರ ಆತ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ನೆಟ್ ನಲ್ಲಿ ಬಿದಿದ್ದಾನೆ.
ಪೊಲೀಸರು ಆತನನ್ನು ರಕ್ಷಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತಾನೂ ಮದುವೆಯಾಗಬೇಕಿದ್ದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ ಹೇಳಿದ್ದಾನೆ.
ಸದ್ಯ ಆತನನ್ನು ರಕ್ಷಿಸಿರುವ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಿದ್ದಾರೆ.
Advertisement