ತೆಲಂಗಾಣ: ವೇತನ ನೀಡುವಂತೆ ಕೇಳಿದ ಅಂಗವಿಕಲ ವ್ಯಕ್ತಿಯ ಎದೆಗೆ ಒದ್ದಿದ್ದ ಪಂಚಾಯಿತಿ ಸರಪಂಚ್‌ನ ಅಮಾನತು

ವೇತನ ನೀಡುವಂತೆ ಒತ್ತಾಯಿಸಿದ ಅಂಗವಿಕಲ ಎನ್‌ಆರ್‌ಇಜಿಎಸ್‌ ಕಾರ್ಯಕರ್ತನನ್ನು ಒದ್ದ ಸರಪಂಚ್‌ನನ್ನು ಮಹಬೂಬ್‌ನಗರ ಜಿಲ್ಲಾಧಿಕಾರಿ ಎಸ್‌.ವೆಂಕಟರಾವ್ ಶುಕ್ರವಾರ ಮುಂದಿನ ವಿಚಾರಣೆವರೆಗೆ ಅಮಾನತುಗೊಳಿಸಿದ್ದಾರೆ.
ಅಂಗವಿಕಲ ವ್ಯಕ್ತಿಗೆ ಒದೆಯುತ್ತಿರುವ ದೃಶ್ಯ
ಅಂಗವಿಕಲ ವ್ಯಕ್ತಿಗೆ ಒದೆಯುತ್ತಿರುವ ದೃಶ್ಯ
Updated on

ಮಹಬೂಬ್‌ನಗರ: ವೇತನ ನೀಡುವಂತೆ ಒತ್ತಾಯಿಸಿದ ಅಂಗವಿಕಲ ಎನ್‌ಆರ್‌ಇಜಿಎಸ್‌ ಕಾರ್ಯಕರ್ತನನ್ನು ಒದ್ದ ಸರಪಂಚ್‌ನನ್ನು ಮಹಬೂಬ್‌ನಗರ ಜಿಲ್ಲಾಧಿಕಾರಿ ಎಸ್‌.ವೆಂಕಟರಾವ್ ಶುಕ್ರವಾರ ಮುಂದಿನ ವಿಚಾರಣೆವರೆಗೆ ಅಮಾನತುಗೊಳಿಸಿದ್ದಾರೆ.

ಈ ಆಘಾತಕಾರಿ ಘಟನೆಯ ವಿಡಿಯೋ ಶುಕ್ರವಾರ ವೈರಲ್ ಆಗಿದ್ದು, ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರು ಸರಪಂಚ್ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹನವಾಡ ಮಂಡಲದ ಪುಲುಪೋನಿಪಲ್ಲಿ ಗ್ರಾಮ ಪಂಚಾಯಿತಿಯ ಸರಪಂಚ್ ಕೋಸ್ಗಿ ಶ್ರೀನಿವಾಸುಲು ಅವರು ಅಂಗವಿಕಲ ಕೃಷ್ಣಯ್ಯನವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕೇಳಿಬರುತ್ತಿದೆ.

ಈ ಬಗ್ಗೆ ಸಂತ್ರಸ್ತ ಆಕ್ಷೇಪ ವ್ಯಕ್ತಪಡಿಸಿದಾಗ, ಶ್ರೀನಿವಾಸುಲು ಲೊಕೊಮೊಟರ್ ಅಸಾಮರ್ಥ್ಯದಿಂದ ಬಳಲುತ್ತಿರುವ ಸಂತ್ರಸ್ತನನ್ನು ಒದೆಯುವುದು ಕಂಡುಬರುತ್ತದೆ. ಕೃಷ್ಣಯ್ಯನ ಮಗ ಎದೆಗೆ ಒದೆಯುವ ಸರಪಂಚನಿಂದ ತನ್ನ ತಂದೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ, ಆದರೆ ವ್ಯರ್ಥವಾಯಿತು.

ಘಟನೆ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ಮಹೆಬೂಬ್‌ನಗರ ಆರ್‌ಡಿಒ ಅನಿಲ್‌ಕುಮಾರ್‌ ಅವರನ್ನು ನೇಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com