ಮಧ್ಯಪ್ರದೇಶ: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುತ್ತಿದ್ದವರ ಮೇಲೆ ಎರಗಿದ ಜವರಾಯ; ಬಸ್-ಲಾರಿ ಡಿಕ್ಕಿ, 15 ಮಂದಿ ದಾರುಣ ಸಾವು, 35 ಜನರಿಗೆ ಗಾಯ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಬಸ್ ಮತ್ತು ಟ್ರಕ್‌ ಮಧ್ಯೆ ಡಿಕ್ಕಿಯಾಗಿ ಸುಮಾರು 15 ಕಾರ್ಮಿಕರು ಮೃತಪಟ್ಟಿರುವುದು ವರದಿಯಾಗಿದೆ.
ಅಪಘಾತಕ್ಕೊಳಗಾದ ಬಸ್ ಮತ್ತು ಲಾರಿ
ಅಪಘಾತಕ್ಕೊಳಗಾದ ಬಸ್ ಮತ್ತು ಲಾರಿ
Updated on

ರೇವಾ(ಮಧ್ಯಪ್ರದೇಶ): ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 15 ಮಂದಿ ಸಾವನ್ನಪ್ಪಿ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಬಸ್ಸಿನಲ್ಲಿ 100 ಪ್ರಯಾಣಿಕರಿದ್ದರು. ರೇವಾದ ಸುಹಾಗಿ ಪಹರಿಯಲ್ಲಿ ನಿಂತಿದ್ದ ಟ್ರಕ್​ಗೆ ಹಿಂದಿನಿಂದ ಬಂದು ಬಸ್​ ಗುದ್ದಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನ ಸುಹಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವ್ರನ್ನ ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು. ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು  ಜನರು ಉತ್ತರ ಪ್ರದೇಶ ನಿವಾಸಿಗಳು ಎಂದು ವರದಿಯಾಗಿದೆ.

ರೇವಾ ಎಸ್​​ಪಿ ನವ್​​ನೀತ್​ ಭಸಿನ್ ಘಟನೆ ಬಗ್ಗೆ ಮಾಹಿತಿ ನೀಡಿ, ಬಸ್​ ಮಧ್ಯಪ್ರದೇಶ ಕಟ್ನಿಯಿಂದ ಹೊರಟಿತ್ತು. ಮೃತರೆಲ್ಲಾ ಕಾರ್ಮಿಕರಾಗಿದ್ದು, ಹೈದರಾಬಾದ್​​ಗೆ ಪ್ರತ್ಯೇಕ ಬಸ್​​ನಲ್ಲಿ ತೆರಳುತ್ತಿದ್ದರು. ದೀಪಾವಳಿ ಹಬ್ಬ ಹಿನ್ನೆಯಲ್ಲಿ ಊರಿಗೆ ಹೋಗುತ್ತಿದ್ದರು. ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ದುರಂತದ ಬಗ್ಗೆ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ದುಃಖ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com