social_icon

ಟಾರ್ಗೆಟ್ ಚೀನಾ?; ಭಾರತ ಸರ್ವಸನ್ನದ್ಧ, ಚೀನಾಗೆ ತಲೆನೋವಾದ ಅಗ್ನಿ-5 ಕ್ಷಿಪಣಿ

ಅರುಣಾಚಲ ಪ್ರದೇಶ ಮತ್ತು ಲಡಾಖ್‌ ಭಾಗದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಚೀನಾಕ್ಕೆ ಕಠಿಣ ಸಂದೇಶ ನೀಡುವ ಭಾರತವು ಕೆಲ ಸರಣಿ ಚಟುವಟಿಕೆಗಳನ್ನು ನಿಗದಿ ಮಾಡಿದ್ದು, ಅದರಲ್ಲಿ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಕೂಡ ಒಂದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Published: 15th December 2022 08:48 PM  |   Last Updated: 15th December 2022 08:48 PM   |  A+A-


agni-5-jinping

ಅಗ್ನಿ-5 ಪರೀಕ್ಷಾರ್ಥ ಉಡಾವಣೆ ಯಶಸ್ವಿ

Posted By : srinivasamurthy
Source : Online Desk

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಲಡಾಖ್‌ ಭಾಗದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಚೀನಾಕ್ಕೆ ಕಠಿಣ ಸಂದೇಶ ನೀಡುವ ಭಾರತವು ಕೆಲ ಸರಣಿ ಚಟುವಟಿಕೆಗಳನ್ನು ನಿಗದಿ ಮಾಡಿದ್ದು, ಅದರಲ್ಲಿ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಕೂಡ ಒಂದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಅಗ್ನಿ5 ಕ್ಷಿಪಣಿ ಪರೀಕ್ಷೆ ನಡೆಸಲಾಯಿತು. ಈ ಕ್ಷಿಪಣಿಯಲ್ಲಿ ಮೂರು ಹಂತದ ಘನ ಇಂಧನ ಎಂಜಿನ್ ಅಳವಡಿಸಲಾಗಿದ್ದು, ಅಗ್ನಿ-5 ಐದು ಸಾವಿರ ಕಿಲೋಮೀಟರ್‌ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. 

ಇದನ್ನೂ ಓದಿ: ತವಾಂಗ್‌ ಘರ್ಷಣೆ ಬಿಸಿಯ ನಡುವೆಯೇ, ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಯಾವುದೇ ದಾಳಿಯನ್ನು ಎದುರಿಸಲು ಭಾರತವು ಸನ್ನದ್ಧವಾಗಿದೆ. ಡಿಸೆಂಬರ್‌ 9 ರಂದು ಅರುಣಾಚಲ ಪ್ರದೇಶದ ತವಾಂಗ್‌ ಭಾಗದಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಲು ಯತ್ನಿಸಿದ ಪಿಎಲ್‌ಎ ಪಡೆಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದಾಗ ಸೇನಾಪಡೆಗಳ ಶಕ್ತಿಯ ಬಗ್ಗೆ ಮತ್ತೊಮ್ಮೆ ಜಗತ್ತಿಗೆ ಸಾಬೀತಾಗಿದೆ. ಇತ್ತೀಚೆಗೆ ಚೀನಾ ಗಡಿ ಭಾಗದಲ್ಲಿ ತನ್ನ ತಂಟೆಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣಕ್ಕೆ ಭಾರತ ಈ ಪ್ರದೇಶದಲ್ಲಿ ತನ್ನ ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತೀಯ ಸೇನೆಯ ಪ್ರತಿಕ್ರಿಯೆ ಕಡಿಮೆ ಇರತ್ತೆ ಅನ್ನೋ ಊಹೆಯಿಂದ ಚೀನಾ ಹೊರಬರಬೇಕಿದೆ: ಮಾಜಿ ವಿದೇಶಾಂಗ ಕಾರ್ಯದರ್ಶಿ 

ಚೀನಾದ ವಾಯುಪಡೆಗಳು ಗಡಿಭಾಗದಲ್ಲಿ ಹೆಚ್ಚಿನ ಚಟುವಟಿಕೆಯನ್ನು ನಡೆಸುತ್ತಿರುವುದನ್ನು ಭಾರತದ ಸೇನೆ ನೋಡಿದ ಬೆನ್ನಲ್ಲಿಯೇ ಅರುಣಾಚಲ ಪ್ರದೇಶದಲ್ಲಿ ಭಾರತದ ವಾಯುಪಡೆ ಕೂಡ ತನ್ನ ಗಸ್ತು ಪ್ರಕ್ರಿಯೆ ಆರಂಭ ಮಾಡಿದೆ. 300ಕ್ಕೂ ಅಧಿಕ ಸೈನಿಕರೊಂದಿಗೆ ಭಾರತದ ಕಡೆಯ ಮೇಲೆ ದಾಳಿ ಮಾಡಲು ಭಾರೀ ತಯಾರಿಯಲ್ಲಿ ಬಂದಿದ್ದ ಚೀನಾಗೆ, ಭಾರತದಿಂದ ದಿಟ್ಟ ಉತ್ತರ ಹೊರತಾಗಿ ಮತ್ತೇನೂ ಸಿಕ್ಕಿರಲಿಲ್ಲ. ಅರುಣಾಚಲ ಪ್ರದೇಶ ಮತ್ತು ಲಡಾಖ್‌ ಭಾಗದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಚೀನಾಕ್ಕೆ ಕಠಿಣ ಸಂದೇಶ ನೀಡುವ ಭಾರತವು ಕೆಲ ಸರಣಿ ಚಟುವಟಿಕೆಗಳನ್ನು ನಿಗದಿ ಮಾಡಿದೆ. ಅದರಲ್ಲಿ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಕೂಡ ಒಂದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾಗೆ ತಲೆನೋವಾದ ಅಗ್ನಿ-5
ಚೀನಾ ಪಾಲಿಗೆ ಬಹುದೊಡ್ಡ ಆತಂಕ ಇರುವುದು ಭಾರತದ ಅಗ್ನಿ-5 ಕ್ಷಿಪಣಿಗಳ ಬಗ್ಗೆ. ಭಾರತದ ಈ ಕ್ಷಿಪಣಿಯ ಬಗ್ಗೆ ಹೆಚ್ಚೆಚ್ಚು ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಚೀನಾ ಪ್ರಯತ್ನಪಟ್ಟರೂ ಅದರಲ್ಲಿ ಯಶಸ್ವಿಯಾಗಿಲ್ಲ. ಇಂಥ ಅಗ್ನಿ-5 ಕ್ಷಿಪಣಿ ಪರೀಕ್ಷೆ ಇಂದು ಒಡಿಶಾ ಕರಾವಳಿಯಲ್ಲಿ ನಡೆದಿದೆ.

ಇದನ್ನೂ ಓದಿ: ತವಾಂಗ್ ಘರ್ಷಣೆ: LAC ಬಳಿ ಕಣ್ಗಾವಲು ಪೋಸ್ಟ್ ನಿರ್ಮಾಣಕ್ಕೆ ಚೀನಾ ಸೇನೆ ಯೋಜಿಸುತ್ತಿತ್ತು: ಭಾರತೀಯ ಸೇನೆ

ಒಡಿಶಾ ಕರಾವಳಿಯಲ್ಲಿ ಹೈ ಅಲರ್ಟ್
ಅಗ್ನಿ 5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ನಿಮಿತ್ತ ರಕ್ಷಣಾ ಪಡೆಗಳಿಗೆ ಹೈ ಅಲರ್ಟ್‌ ಘೋಷಣೆ ಮಾಡಿ ಈ ಸಂಬಂಧ ನೋಟಿಸ್‌ ಕೂಡ ಜಾರಿಯಾಗಿತ್ತು. ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-V ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಸಂಬಂಧ ಬಂಗಾಳ ಕೊಲ್ಲಿಯಲ್ಲಿ ಹಾರಾಟ ನಿಷೇಧ ವಲಯ ಎಂದು ಘೋಷಣೆ ಮಾಡಲಾಗಿತ್ತು. ಕ್ಷಿಪಣಿ ಪರೀಕ್ಷೆಗೆ ಮುಂಚಿತವಾಗಿ, ಚೀನಾ ಡಿಸೆಂಬರ್ 6 ರಂದು ಹಿಂದೂ ಮಹಾಸಾಗರಕ್ಕೆ ಚೀನಾ ತನ್ನ ಬೇಹುಗಾರಿಕಾ ಹಡಗನ್ನು ಕಳುಹಿಸಿತ್ತು. ಪರೀಕ್ಷೆಗೆ ಒಳಪಡುವ ಸಾಧ್ಯತೆಯಿರುವ ಕ್ಷಿಪಣಿಯು ಗರಿಷ್ಠ 5,400 ಕಿಲೋಮೀಟರ್ ದೂರದವರೆಗೆ ಹಾರಲಿದೆ ಎಂದು ಹೇಳಲಾಗಿದೆ.

ಏನಿದು ಅಗ್ನಿ-5 ಕ್ಷಿಪಣಿ: 
ಭಾರತವು ಅಭಿವೃದ್ಧಿಪಡಿಸಿದ ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳ ಸರಣಿಯಲ್ಲಿ ಅಗ್ನಿ-5 ಐದನೆಯದು. ಕ್ಷಿಪಣಿಯನ್ನು ಮೊದಲು 2012 ರಲ್ಲಿ ಪರೀಕ್ಷೆ ಮಾಡಲಾಗಿತ್ತು. ನಂತರದ ಪರೀಕ್ಷೆಗಳನ್ನು 2013, 2015, 2016, 2018 ಮತ್ತು 2021 ರಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ: 2020ರಲ್ಲಿ ಚೀನಾಗೆ ಮೋದಿ ಜೀ ಕ್ಲೀನ್ ಚಿಟ್ ನೀಡಿರುವ ಕುರಿತ ರಹಸ್ಯವೇನು?: ತವಾಂಗ್ ಘರ್ಷಣೆ ಕುರಿತು ಕಾಂಗ್ರೆಸ್ ಪ್ರಶ್ನೆ

ಇನ್ಮುಂದೆ ಬ್ರಹ್ಮೋಸ್‌ ಕ್ಷಿಪಣಿಗೆ ಮೇಡ್‌ ಇನ್‌ ಇಂಡಿಯಾ ಬೂಸ್ಟರ್‌!
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2008 ರಲ್ಲಿ ಅಗ್ನಿ-5 ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಅಗ್ನಿ 5 ಕೂಡ ಜಲಾಂತರ್ಗಾಮಿ ಮೂಲಕ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ-5 ಆತಂಕ ಏಕೆ?: 
ಅಗ್ನಿ 5 ಯೋಜನೆಯು, 12,000-15,000 ಕಿಮೀ ವ್ಯಾಪ್ತಿಯಲ್ಲಿರುವ ಡಾಂಗ್‌ಫೆಂಗ್-41 ನಂತಹ ಕ್ಷಿಪಣಿಗಳನ್ನು ಹೊಂದಿರುವ ಚೀನಾದ ವಿರುದ್ಧ ಭಾರತದ "ಪರಮಾಣು ತಡೆ" ಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 5 ಸಾವಿರ ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ, ಅಗ್ನಿ-5 ಚೀನಾದ ಉತ್ತರದ ಭಾಗಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿಯೇ ಈ ಖಂಡಾಂತರ ಕ್ಷಿಪಣಿ ಚೀನಾಕ್ಕೆ ಭಾರೀ ತಲ್ಲಣ ಮೂಡಿಸಿದೆ. ಏತನ್ಮಧ್ಯೆ, ಚೀನಾದ ಸರ್ಕಾರಿ ಮಾಧ್ಯಮಗಳು ಈ ಕ್ಷಿಪಣಿಯು ವ್ಯಾಪ್ತಿ 8,000 ಕಿ.ಮೀ ಆಗಿರಬಹುದು ಎಂದು ಅಂದಾಜಿಸಿವೆ. ಇದರೊಂದಿಗೆ ಭಾರತೀಯ ವಾಯುಪಡೆ (IAF) ತನ್ನ ವಿಮಾನದ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಈಶಾನ್ಯ ರಾಜ್ಯದಲ್ಲಿ ಎರಡು ದಿನಗಳ ಯುದ್ಧ ವ್ಯಾಯಾಮ ಆರಂಭ ಮಾಡಲಿದೆ.

ಇದನ್ನೂ ಓದಿ: ಗಡಿಯಲ್ಲಿ ಯಥಾಸ್ಥಿತಿ ಬದಲಿಸಲು ಯತ್ನ: ಭಾರತದ ಆರೋಪ ತಳ್ಳಿಹಾಕಿದ ಚೀನಾ 

ಭಾರತವು ಅಭಿವೃದ್ಧಿಪಡಿಸಿದ ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳ ಸರಣಿಯಲ್ಲಿ ಅಗ್ನಿ-5 ಐದನೆಯದು. ಕ್ಷಿಪಣಿಯನ್ನು ಮೊದಲ ಬಾರಿಗೆ 2012 ರಲ್ಲಿ ಪರೀಕ್ಷೆ ಮಾಡಲಾಗಿತ್ತು. ನಂತರದ ಪರೀಕ್ಷೆಗಳನ್ನು 2013, 2015, 2016, 2018 ಮತ್ತು 2021 ರಲ್ಲಿ ನಡೆಸಲಾಯಿತು. 


Stay up to date on all the latest ದೇಶ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp