social_icon

ಕೊಲಿಜಿಯಂ ವ್ಯವಸ್ಥೆ ಬಗ್ಗೆ ಜನರಿಗೆ ಸಂತೋಷವಿಲ್ಲ, ನ್ಯಾಯಾಧೀಶರನ್ನು ನೇಮಿಸುವುದು ಸರ್ಕಾರದ ಕೆಲಸ: ಕಿರಣ್ ರಿಜಿಜು

ಕೊಲಿಜಿಯಂ ವ್ಯವಸ್ಥೆಯಿಂದ ದೇಶದ ಜನತೆ ಸಂತುಷ್ಟರಾಗಿಲ್ಲ, ಸಂವಿಧಾನದ ಆಶಯದಂತೆ ನ್ಯಾಯಾಧೀಶರನ್ನು ನೇಮಿಸುವುದು ಸರ್ಕಾರದ ಕೆಲಸ ಎಂದು ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

Published: 18th October 2022 11:45 AM  |   Last Updated: 18th October 2022 02:11 PM   |  A+A-


Kiren rijiju

ಸಚಿವ ಕಿರಣ್ ರಿಜಿಜು

PTI

ಅಹಮದಾಬಾದ್: ಕೊಲಿಜಿಯಂ ವ್ಯವಸ್ಥೆಯಿಂದ ದೇಶದ ಜನತೆ ಸಂತುಷ್ಟರಾಗಿಲ್ಲ, ಸಂವಿಧಾನದ ಆಶಯದಂತೆ ನ್ಯಾಯಾಧೀಶರನ್ನು ನೇಮಿಸುವುದು ಸರ್ಕಾರದ ಕೆಲಸ ಎಂದು ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಪ್ರಕಟಿಸುವ ಪಾಂಚಜನ್ಯ ಎಂಬ ವಾರಪತ್ರಿಕೆ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಸಬರಮತಿ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೇಮಕಾತಿಗಳನ್ನು ನಿರ್ಧರಿಸುವುದರಲ್ಲಿಯೇ ನ್ಯಾಯಾಧೀಶರು ಅರ್ಧದಷ್ಟು ಸಮಯ ನಿರತವಾಗಿರುವುದನ್ನು ಗಮನಿಸಿದ್ದೇನೆ. ಈ ಕಾರಣದಿಂದಾಗಿಯೇ, ಅವರ ಪ್ರಾಥಮಿಕ ಕೆಲಸವಾದ ನ್ಯಾಯವನ್ನು ನೀಡುವುದು ತೊಂದರೆಗೆ ಸಿಲುಕಿದೆ' ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಉನ್ನತ ನ್ಯಾಯಾಂಗಕ್ಕೆ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು.

'1993 ರವರೆಗೆ, ಭಾರತದ ಪ್ರತಿಯೊಬ್ಬ ನ್ಯಾಯಾಧೀಶರನ್ನು ಕಾನೂನು ಸಚಿವಾಲಯವು ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ನೇಮಕ ಮಾಡುತ್ತಿತ್ತು. ಆ ಸಮಯದಲ್ಲಿ ನಾವು ಅತ್ಯಂತ ಪ್ರತಿಷ್ಠಿತ ನ್ಯಾಯಾಧೀಶರನ್ನು ಹೊಂದಿದ್ದೆವು' ಎಂದು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

'ಸಂವಿಧಾನವು ಈ ಬಗ್ಗೆ ಸ್ಪಷ್ಟವಾಗಿದೆ. ಭಾರತದ ರಾಷ್ಟ್ರಪತಿಗಳು ನ್ಯಾಯಾಧೀಶರನ್ನು ನೇಮಿಸುತ್ತಾರೆ. ಅಂದರೆ, ಕಾನೂನು ಸಚಿವಾಲಯವು ಭಾರತದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ನ್ಯಾಯಾಧೀಶರನ್ನು ನೇಮಿಸುತ್ತದೆ ಎಂದು ಹೇಳುತ್ತದೆ' ಎಂದು ಅವರು ಹೇಳಿದರು.

ಇದನ್ನೂ ಓದಿ: ಸುಪ್ರೀಂಗೆ ಇಬ್ಬರು ನ್ಯಾಯಾಧೀಶರ ನೇಮಕ; 34 ನ್ಯಾಯಾಧೀಶರ ಪೂರ್ಣ ಸಾಮರ್ಥ್ಯ ಹೊಂದಲಿದೆ ಸರ್ವೋಚ್ಚ ನ್ಯಾಯಾಲಯ

1993ರಲ್ಲಿ ಸುಪ್ರೀಂ ಕೋರ್ಟ್ ಸಮಾಲೋಚನೆಯನ್ನು ಸಮ್ಮತಿ ಎಂದು ವ್ಯಾಖ್ಯಾನಿಸಿತು. ನ್ಯಾಯಾಂಗದ ನೇಮಕಾತಿಗಳಲ್ಲಿ ಸಮಾಲೋಚನೆಯನ್ನು ಒಪ್ಪಿಗೆ ಎಂದು ವ್ಯಾಖ್ಯಾನಿಸಿಲ್ಲ. ಆದರೆ, 1998 ರಲ್ಲಿ ನ್ಯಾಯಾಂಗದಿಂದಲೇ ಕೊಲಿಜಿಯಂ ವ್ಯವಸ್ಥೆಯನ್ನು ವಿಸ್ತರಿಸಲಾಯಿತು' ಎಂದರು.

ಸುಪ್ರೀಂ ಕೋರ್ಟ್ ಕೊಲಿಜಿಯಂ ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿದೆ ಮತ್ತು ನ್ಯಾಯಾಲಯದ ನಾಲ್ಕು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿದೆ. ಕೊಲಿಜಿಯಂನ ಶಿಫಾರಸುಗಳಿಗೆ ಸಂಬಂಧಿಸಿದಂತೆ ಸರ್ಕಾರವು ಆಕ್ಷೇಪಣೆಗಳನ್ನು ಎತ್ತಬಹುದು ಅಥವಾ ಸ್ಪಷ್ಟೀಕರಣಗಳನ್ನು ಪಡೆಯಬಹುದು. ಆದರೆ, ಐದು ಸದಸ್ಯರ ಸಂಸ್ಥೆಯ ಹೆಸರನ್ನು ತೆರವುಗೊಳಿಸಲು ಅದು ಕಾರ್ಯವಿಧಾನಕ್ಕೆ ಬದ್ಧವಾಗಿದೆ ಎಂದು ಪುನರುಚ್ಚರಿಸುತ್ತದೆ.

ಭಾರತವನ್ನು ಹೊರತುಪಡಿಸಿ ಜಗತ್ತಿನಲ್ಲಿ ಎಲ್ಲಿಯೂ ನ್ಯಾಯಾಧೀಶರು ತಮ್ಮ ಸಹೋದರರನ್ನು ನ್ಯಾಯಾಧೀಶರನ್ನಾಗಿ ನೇಮಿಸುವ ಪದ್ಧತಿ ಇಲ್ಲ. ಕಾನೂನು ಸಚಿವನಾಗಿ, ನ್ಯಾಯಾಧೀಶರ ಅರ್ಧದಷ್ಟು ಸಮಯ ಮುಂದಿನ ನ್ಯಾಯಾಧೀಶರು ಯಾರೆಂದು ನಿರ್ಧರಿಸುವಲ್ಲಿ ನಿರತವಾಗಿರುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಅವರ ಪ್ರಾಥಮಿಕ ಕೆಲಸ ನ್ಯಾಯವನ್ನು ನೀಡುವುದು, ಈ ಅಭ್ಯಾಸದಿಂದ ಅದು ಬಳಲುತ್ತಿದೆ' ಎಂದು ಅವರು ಹೇಳಿದರು.


Stay up to date on all the latest ದೇಶ news
Poll
rahul-gandhi

ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆ; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಇದರಿಂದ...


Result
ಕಾಂಗ್ರೆಸ್ ಗೆ ಹಿನ್ನಡೆ
ಕಾಂಗ್ರೆಸ್ ಗೆ ಪ್ರಯೋಜನ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp