ಸೈಬರ್ ಅಪರಾಧ ನಿಯಂತ್ರಣದತ್ತ ಕೇಂದ್ರ ಗಮನಹರಿಸುತ್ತಿದೆ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯಲ್ಲಿ ಅಶ್ವಿನಿ ವೈಷ್ಣವ್

ಕೇಂದ್ರ ಸರ್ಕಾರ ಸೈಬರ್ ವಂಚನೆ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನಹರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಚಿವ ಅಶ್ವಿನಿ ವೈಷ್ಣವ್‌
ಸಚಿವ ಅಶ್ವಿನಿ ವೈಷ್ಣವ್‌
Updated on

ಬೆಂಗಳೂರು: ಕೇಂದ್ರ ಸರ್ಕಾರ ಸೈಬರ್ ವಂಚನೆ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನಹರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್,  3 ದಿನಗಳ ಹಿಂದೆ ನಾವು ಎರಡು ಸುಧಾರಣೆಗಳನ್ನು ಘೋಷಿಸಿದ್ದು, ಈ ಮೂಲಕ ಪ್ರತಿಯೊಬ್ಬ ಡೀಲರ್ ನ್ನೂ ಪರಿಶೀಲನೆ ಮಾಡುತ್ತೇವೆ ಈ ಮೂಲಕ ಸೈಬರ್ ವಂಚನೆ ಹಾಗೂ ಇತರ ವಂಚಕ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರತ್ತ ಗಮನ ಕೇಂದ್ರೀಕರಿಸಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಇದು ಪ್ರಧಾನಿ ಮೋದಿ ಅವರು ಡಿಜಿಟಲ್ ಇಂಡಿಯಾದೊಂದಿಗೆ ಆರಂಭಿಸಿದ್ದಕ್ಕೆ ಅತ್ಯುತ್ತಮ ಸಾಕ್ಷ್ಯವಾಗಿದೆ ಹಾಗೂ ಈ ಮೂಲಕ ಅತ್ಯಂತ ಕಡಿಮೆ ಆದಾಯವಿರುವ ಮಂದಿಗೂ ತಂತ್ರಜ್ಞಾನ ಲಭ್ಯವಾಗುತ್ತಿದೆ, ಅದರ ಲಾಭವನ್ನು ಅವರೂ ಪಡೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.

ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಗೆ ಭಾರತದ ನಾಯಕತ್ವ ಮೂರು ಆದ್ಯತೆಯ ವಲಯ- ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯ (ಡಿಪಿಐ), ಡಿಜಿಟಲ್ ಎಕಾನಮಿಯಲ್ಲಿ ಭದ್ರತೆ ಹಾಗೂ ಡಿಜಿಟಲ್ ಸ್ಕೇಲಿಂಗ್ ಆಯ್ಕೆ ಮಾಡಿರುವುದನ್ನು ಅಶ್ವಿನಿ ವೈಷ್ಣವ್ ಒತ್ತಿ ಹೇಳಿದ್ದು ಈ ಮೂರು ಪ್ರಧಾನಿ ಮೋದಿ ಅವರ ಆದ್ಯತೆಗಳನ್ನು ಸೂಚಿಸುತ್ತವೆ ಎಂದಿದ್ದಾರೆ.  

ಈ ಆದ್ಯತೆಗಳು ಸುರಕ್ಷಿತ ಡಿಜಿಟಲ್ ಆರ್ಥಿಕತೆಯ ವಿಶಾಲ ಜಾಗತಿಕ ಕಾರ್ಯಸೂಚಿಗಳಿಗೆ ಹೊಂದಿಕೆಯಾಗಲಿವೆ, ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ಪ್ರಧಾನಿ ಮೋದಿ ನಂಬಿಕೆ ಇಟ್ಟಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com