ನಕಲಿ ನೋಟುಗಳ ಪ್ರಿಂಟ್ ಮಾಡುವ ದಂಧೆ; ಕರ್ನಾಟಕ ಸೇರಿದಂತೆ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ನಾಲ್ಕು ರಾಜ್ಯಗಳಲ್ಲಿ ನಕಲಿ ನೋಟು ದಂಧೆಯನ್ನು ಭೇದಿಸಲು ನಡೆಸಿದ ದಾಳಿಯಲ್ಲಿ ನಕಲಿ ನೋಟುಗಳು, ಕರೆನ್ಸಿ ಮುದ್ರಣ ಕಾಗದ ಮತ್ತು ಡಿಜಿಟಲ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ನಾಲ್ಕು ರಾಜ್ಯಗಳಲ್ಲಿ ನಕಲಿ ನೋಟು ದಂಧೆಯನ್ನು ಭೇದಿಸಲು ನಡೆಸಿದ ದಾಳಿಯಲ್ಲಿ ನಕಲಿ ನೋಟುಗಳು, ಕರೆನ್ಸಿ ಮುದ್ರಣ ಕಾಗದ ಮತ್ತು ಡಿಜಿಟಲ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಗಡಿಯಾಚೆಗೆ ಕಳ್ಳಸಾಗಣೆ ಮಾಡಲು ಮತ್ತು ಭಾರತದಲ್ಲಿ ಚಲಾವಣೆಗೆ ಉತ್ತೇಜಿಸಲು ಶಂಕಿತ ವ್ಯಕ್ತಿಗಳು ರೂಪಿಸಿದ ದೊಡ್ಡ ಪಿತೂರಿಗೆ ಸಂಬಂಧಿಸಿದಂತೆ ನವೆಂಬರ್ 24 ರಂದು ದಾಖಲಾದ ಪ್ರಕರಣದ ಎನ್‌ಐಎ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಆರೋಪಿ ರಾಹುಲ್ ತಾನಾಜಿ ಪಾಟೀಲ್ ಅಲಿಯಾಸ್ ಜಾವೇದ್, ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯ ವಿವೇಕ್ ಠಾಕೂರ್ ಅಲಿಯಾಸ್ ಆದಿತ್ಯ ಸಿಂಗ್ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್ ಅವರ ಸ್ಥಳಗಳಲ್ಲಿ ಎನ್‌ಐಎ ತಂಡಗಳು ಶೋಧ ನಡೆಸಿವೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶಂಕಿತ ಶಿವ ಪಾಟೀಲ್ ಅಲಿಯಾಸ್ 'ಭೀಮ್ರಾವ್' ಮತ್ತು ಬಿಹಾರದ ರೋಹ್ತಾಸ್ ಜಿಲ್ಲೆಯ ಶಶಿಭೂಷಣ್ ಅವರ ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿವೇಕ್ ಠಾಕೂರ್ ಮನೆಯಿಂದ ಕರೆನ್ಸಿ ಪ್ರಿಂಟಿಂಗ್ ಪೇಪರ್ ಜೊತೆಗೆ 6,600 ರೂ. ಮುಖಬೆಲೆಯ (500, 200 ಮತ್ತು 100 ರೂ. ಮುಖಬೆಲೆಯ) ನಕಲಿ ನೋಟುಗಳನ್ನು (ಎಫ್‌ಐಸಿಎನ್) ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪಾಟೀಲ್ ಮತ್ತು ಇತರರೊಂದಿಗೆ ಠಾಕೂರ್ ಗಡಿ ದೇಶಗಳಿಂದ ನಕಲಿ ಕರೆನ್ಸಿ ಮತ್ತು ಮುದ್ರಣ ಪರಿಕರಗಳನ್ನು ಸಂಗ್ರಹಿಸುತ್ತಿದ್ದರು. ಭಾರತದಾದ್ಯಂತ ನಕಲಿ ಕರೆನ್ಸಿಯನ್ನು ಚಲಾವಣೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎನ್‌ಐಎ ತನಿಖೆಯಲ್ಲಿ ಪಾಟೀಲ್ ಅವರು ನಕಲಿ ನೋಟುಗಳನ್ನು ಪೂರೈಸುವುದಾಗಿ ಭರವಸೆ ನೀಡಿ ವಂಚನೆಯಿಂದ ಪಡೆದ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಹಣ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮಹೇಂದರ್ ಅವರ ಮನೆಯಲ್ಲಿ ನಡೆಸಿದ ಶೋಧದಲ್ಲಿ ನಕಲಿ ನೋಟುಗಳನ್ನು ಉತ್ಪಾದಿಸುವ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com