ಆದಾಯ ತೆರಿಗೆ ದಾಳಿಯಲ್ಲಿ 50 ಕೋಟಿ ರೂ. ಪತ್ತೆ; ಹಣವನ್ನು ಎಣಿಸಲಾಗದೆ ಕೆಟ್ಟು ಹೋದ ಎಣಿಕೆ ಯಂತ್ರಗಳು!

ಆದಾಯ ತೆರಿಗೆ ಇಲಾಖೆ ತಂಡವು ಒಡಿಶಾ ಮತ್ತು ಜಾರ್ಖಂಡ್‌ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ಕಂಪನಿಗೆ ಸಂಬಂಧಿಸಿದ ಆವರಣದಲ್ಲಿ ಅಪಾರ ಪ್ರಮಾಣದ ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐಟಿ ದಾಳಿಯಲ್ಲಿ ಸಿಕ್ಕ ಹಣ
ಐಟಿ ದಾಳಿಯಲ್ಲಿ ಸಿಕ್ಕ ಹಣ

ಆದಾಯ ತೆರಿಗೆ ಇಲಾಖೆ ತಂಡವು ಒಡಿಶಾ ಮತ್ತು ಜಾರ್ಖಂಡ್‌ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ಕಂಪನಿಗೆ ಸಂಬಂಧಿಸಿದ ಆವರಣದಲ್ಲಿ ಅಪಾರ ಪ್ರಮಾಣದ ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆಯು ಒಡಿಶಾದ ಬೋಲಂಗಿರ್, ಸಂಬಲ್‌ಪುರ ಮತ್ತು ಜಾರ್ಖಂಡ್‌ನ ರಾಂಚಿ, ಲೋಹರ್‌ಡಗಾದಲ್ಲಿ ದಾಳಿ ನಡೆಸಿದ್ದು ಇನ್ನೂ ಮುಂದುವರಿದಿದೆ. ಮೂಲಗಳ ಪ್ರಕಾರ, ಬುಧವಾರವೇ ದಾಳಿಯಲ್ಲಿ 50 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಆದರೆ ಹೆಚ್ಚಿನ ಸಂಖ್ಯೆಯ ನೋಟುಗಳಿಂದಾಗಿ ಎಣಿಕೆ ಯಂತ್ರಗಳು ಕೈಕೊಟ್ಟಿದ್ದವು.

ಬೌಧ್ ಡಿಸ್ಟಿಲರೀಸ್ ಅಲ್ಲದೆ, ಜಾರ್ಖಂಡ್‌ನ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಉದ್ಯಮಿ ರಾಮಚಂದ್ರ ರುಂಗ್ಟಾ ಅವರ ಆವರಣದ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಆದಾಯ ತೆರಿಗೆ ಇಲಾಖೆಯು ರಾಮಗಢ, ರಾಂಚಿ ಮತ್ತು ಇತರ ಸ್ಥಳಗಳಲ್ಲಿ ಅವರ ನಿವಾಸ ಮತ್ತು ಸಂಸ್ಥೆಗಳ ಮೇಲೆ ಬೆಳಿಗ್ಗೆಯಿಂದ ದಾಳಿ ನಡೆಸುತ್ತಿದೆ. ರಾಮಗಢ ಮತ್ತು ರಾಂಚಿಯಲ್ಲಿರುವ ರಾಮಚಂದ್ರ ರುಂಗ್ಟಾದ ಹಲವು ಸ್ಥಳಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಆರ್ ಪಿಎಫ್ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. 

ಮಾಹಿತಿಯ ಪ್ರಕಾರ, ರಾಮಗಢ ಜಿಲ್ಲೆಯ ಹಲವೆಡೆ ಇರುವ ಕಾರ್ಖಾನೆಗಳು ಮತ್ತು ನಿವಾಸಗಳಲ್ಲಿ ತನಿಖೆ ನಡೆಯುತ್ತಿದೆ. ರಾಮ್‌ಗಢ್ ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ಇರುವ ರಾಮಚಂದ್ರ ರುಂಗ್ಟಾ ಅವರ ವಸತಿ ಕಚೇರಿಯಲ್ಲಿ ಬೆಳಿಗ್ಗೆಯಿಂದಲೇ ಅಧಿಕಾರಿಗಳು ಜಮಾಯಿಸಿದ್ದರು. ಐದು ವಾಹನಗಳಲ್ಲಿ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com