ಬಿಹಾರ: ಗುಂಡಿಕ್ಕಿ ಎಐಎಂಐಎಂ ನಾಯಕನ ಹತ್ಯೆ!

ಬಿಹಾರದಲ್ಲಿ ಎಐಎಂಐಎಂ ನಾಯಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನಾಮಿಕ ವ್ಯಕ್ತಿಗಳಿಂದ ಈ ದುಷ್ಕೃತ್ಯ ಎಸಗಿದ್ದು, ಸಿವಾನ್ ನಲ್ಲಿ ಈ ಘಟನೆ ವರದಿಯಾಗಿದೆ.
ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)

ಪಾಟ್ನ: ಬಿಹಾರದಲ್ಲಿ ಎಐಎಂಐಎಂ ನಾಯಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನಾಮಿಕ ವ್ಯಕ್ತಿಗಳಿಂದ ಈ ದುಷ್ಕೃತ್ಯ ಎಸಗಿದ್ದು, ಸಿವಾನ್ ನಲ್ಲಿ ಈ ಘಟನೆ ವರದಿಯಾಗಿದೆ.

ಅಧಿಕಾರಿಗಳ ಪ್ರಕಾರ, ಗುಂಡಿನ ದಾಳಿಗೆ ಒಳಗಾದ ಜಮಾಲ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರ ಹಿಂದಿನ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಜಮಾಲ್ ತನ್ನ ಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದು, ಓರ್ವ ಆತನ ಹೊಟ್ಟೆಗೆ ಹೊಡೆದಿದ್ದಾರೆ.

ಅವರನ್ನು ಮೊದಲು ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಖಾಸಗಿ ಆಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಆಸ್ಪತ್ರೆಗೆ ಕರೆದೊಯ್ಯುವಾಗ ಆರಿಫ್ ಜಮಾಲ್ ಜೊತೆಗಿದ್ದ ಜಾಕಿರ್ ಎಂಬ ವ್ಯಕ್ತಿಯೊಬ್ಬ, "ಈ ಘಟನೆ ರಾತ್ರಿ 8:30 ರಿಂದ 9 ಗಂಟೆಯ ನಡುವೆ ನಡೆದಿದೆ, ಜಮಾಲ್ ಹುಸೇಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಅಂಗಡಿಯಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದರು ಎಂದು ಹೇಳಿದ್ದಾರೆ.

ಎಕ್ಸ್ (ಹಿಂದಿನ ಟ್ವಿಟ್ಟರ್) ನಲ್ಲಿನ ಪೋಸ್ಟ್‌ನಲ್ಲಿ, ಎಐಎಂಐಎಂ ವಕ್ತಾರ ಆದಿಲ್ ಹಸನ್, ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com