ಜಾರ್ಖಂಡ್‌: ಮಕ್ಕಳು ಸೇರಿ ನಾಲ್ವರನ್ನು ಕೊಂದಿದ್ದ ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ

ಗರ್ಹ್ವಾ ಮತ್ತು ಲತೇಹಾರ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಕೊಂದ ನರಭಕ್ಷಕ ಚಿರತೆಯ ವಿರುದ್ಧ ಜಾರ್ಖಂಡ್ ಅರಣ್ಯ ಇಲಾಖೆ ಅಂತಿಮವಾಗಿ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಜಾರಿಗೊಳಿಸಿದೆ. ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಚಿರತೆಯನ್ನು ಕೊಲ್ಲಲು ಷರತ್ತುಬದ್ಧ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಂಚಿ: ಗರ್ಹ್ವಾ ಮತ್ತು ಲತೇಹಾರ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಕೊಂದ ನರಭಕ್ಷಕ ಚಿರತೆಯ ವಿರುದ್ಧ ಜಾರ್ಖಂಡ್ ಅರಣ್ಯ ಇಲಾಖೆ ಅಂತಿಮವಾಗಿ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಜಾರಿಗೊಳಿಸಿದೆ. ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಚಿರತೆಯನ್ನು ಕೊಲ್ಲಲು ಷರತ್ತುಬದ್ಧ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಚಿರತೆಯನ್ನು ಶಾಂತಗೊಳಿಸಲು ಮತ್ತು ಜೀವಂತವಾಗಿ ಹಿಡಿಯಲು ಅರಣ್ಯ ಇಲಾಖೆಯು ಹೈದರಾಬಾದ್ ಮೂಲದ ಪ್ರಸಿದ್ಧ ಬೇಟೆಗಾರ ನವಾಬ್ ಶಫತ್ ಅಲಿ ಖಾನ್ ಅವರನ್ನು ಸಂಪರ್ಕಿಸಿದೆ. ಈಗ, ಚಿರತೆಗೆ ಗುಂಡಿಟ್ಟು ಕೊಲ್ಲಲು ಆದೇಶ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರು ನರಭಕ್ಷಕ ಚಿರತೆಯನ್ನು ಶೂಟ್ ಮಾಡಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ.

'ಯಾರಿಗಾದರೂ ಜೀವ ಬೆದರಿಕೆಯಿದ್ದರೆ, ಚಿರತೆಯನ್ನು ಕೊಲ್ಲಬಹುದು. ಆದಾಗ್ಯೂ, ಚಿರತೆಯನ್ನು ಸಮಾಧಾನಪಡಿಸುವ ಮೂಲಕ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ನರಭಕ್ಷಕ ಚಿರತೆಯನ್ನು ತೊಡೆದುಹಾಕಲು 'ಶೂಟಿಂಗ್' ಮಾಡುವುದು ಕೊನೆಯ ಮಾರ್ಗವಾಗಿದೆ ' ಎಂದು ಪಿಸಿಸಿಎಫ್ (ವನ್ಯಜೀವಿ) ಶಶಿಕರ್ ಸಾಮಂತ ಹೇಳಿದ್ದಾರೆ.

ಪಲಾಮು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (RCCF) ಕುಮಾರ್ ಅಶುತೋಷ್ ಅವರು ಜನವರಿ 10 ರಂದು ಈ ಹಿಂದೆ ಮಾಡಿದ ಶಿಫಾರಸುಗಳ ಹಿನ್ನೆಲೆಯಲ್ಲಿ ಶೂಟಿಂಗ್ ಆದೇಶವನ್ನು ನೀಡಿದ್ದಾರೆ.

ಅರಣ್ಯ ಅದಿಕಾರಿಗಳ ಪ್ರಕಾರ, ಚಿರತೆ ವಿರುದ್ಧ ಸಮಾಧಾನಪಡಿಸುವ ಆರ್ಡರ್ ಅನ್ನು ಡಿಸೆಂಬರ್ 18 ರಂದು ನೀಡಲಾಯಿತು. ಅಂದಿನಿಂದ ಅದನ್ನು ಹಿಡಿಯಲು ನಿಯಮಿತವಾಗಿ ಪ್ರಯತ್ನಿಸಲಾಯಿತು. ಆದರೆ, ಚಿರತೆ ಹಿಡಿಯುವಲ್ಲಿ ವಿಫಲರಾಗಿದ್ದು, ಈಗ ನರಭಕ್ಷಕ ಚಿರತೆಯನ್ನು ಕೊಲ್ಲಲು ಆಧುನಿಕ ಬಂದೂಕುಗಳನ್ನು ಬಳಸಲಾಗುವುದು ಎಂದು ಅವರು ಹೇಳಿದರು.

ಡಿಸೆಂಬರ್ 28 ರಂದು ಕುಶ್ವಾಹ ಗ್ರಾಮದಲ್ಲಿ 12 ವರ್ಷದ ಬಾಲಕನನ್ನು ಚಿರತೆ ಕೊಂದಿದೆ. ಇದಕ್ಕೂ ಮೊದಲು, ಡಿಸೆಂಬರ್ 10 ರಂದು ಲತೇಹರ್ ಜಿಲ್ಲೆಯ ಉಕಮದ್ ಗ್ರಾಮದಲ್ಲಿ 12 ವರ್ಷದ ಬಾಲಕಿಯ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿತ್ತು.

ಎರಡನೇ ಘಟನೆ ಡಿಸೆಂಬರ್ 14 ರಂದು ನಡೆದಿದ್ದು, ಗರ್ವಾ ಜಿಲ್ಲೆಯ ರೋಡೋ ಗ್ರಾಮದಲ್ಲಿ 9 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದೆ. ಮೂರನೇ ಘಟನೆ ಡಿಸೆಂಬರ್ 19 ರಂದು ರಂಕಾ ಬ್ಲಾಕ್‌ನಲ್ಲಿ ಸಂಭವಿಸಿದ್ದು, ಚಿರತೆ ದಾಳಿಯಲ್ಲಿ 7 ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ. ಅದೇ ರೀತಿ, ಜನವರಿಯ ಮೊದಲ ವಾರದಲ್ಲಿ ಪಲಾಮು ಹುಲಿ ಸಂರಕ್ಷಿತ ಪ್ರದೇಶದ ಬರ್ವಾಡಿಹ್ ಬ್ಲಾಕ್‌ನಲ್ಲಿ ಅದೇ ಚಿರತೆ ಎಂದು ಶಂಕಿಸಲಾದ ಕಾಡು ಪ್ರಾಣಿಯಿಂದ ಹಿರಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

'ನರಭಕ್ಷಕ' ಚಿರತೆಯನ್ನು ಹಿಡಿಯಲು ಜಾರ್ಖಂಡ್ ಅರಣ್ಯ ಇಲಾಖೆಯು 50 ಟ್ರ್ಯಾಪ್ ಕ್ಯಾಮೆರಾಗಳು, ಒಂದು ಡ್ರೋನ್ ಮತ್ತು ಹೆಚ್ಚಿನ ಸಂಖ್ಯೆಯ ಅರಣ್ಯಾಧಿಕಾರಿಗಳನ್ನು ನೇಮಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com