ಮಣಿಪುರ: ನಿರಾಶ್ರಿತರ ಶಿಬಿರದಲ್ಲಿ ಮಕ್ಕಳೊಂದಿಗೆ ಊಟ ಸವಿದ ರಾಹುಲ್!

ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ತೆರಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅಲ್ಲಿರುವ ಮಕ್ಕಳೊಂದಿಗೆ ಊಟ ಮಾಡುವ ಮೂಲಕ ಕೆಲ ಹೊತ್ತು ಅಲ್ಲಿಯೇ ಕಳೆದಿದ್ದಾರೆ.
ಮಕ್ಕಳೊಂದಿಗೆ ರಾಹುಲ್
ಮಕ್ಕಳೊಂದಿಗೆ ರಾಹುಲ್

ಇಂಫಾಲ್: ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ತೆರಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅಲ್ಲಿರುವ ಮಕ್ಕಳೊಂದಿಗೆ ಊಟ ಮಾಡುವ ಮೂಲಕ ಕೆಲ ಹೊತ್ತು ಅಲ್ಲಿಯೇ ಕಳೆದಿದ್ದಾರೆ. ಈ ಕ್ಷಣದ ಫೋಟೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಪ್ರೀತಿ ಮತ್ತು ದಯೆ ಯಾವಾಗಲೂ ಹಿಂಸೆಯನ್ನು ಸೋಲಿಸುತ್ತದೆ ಎಂದು ಹೇಳಿದೆ. 

ಬಳಿಕ ಮೊಯಿರಾಂಗ್‌ ನ ನಿರಾಶ್ರಿತರ ಶಿಬಿರಗಳಿಗೆ  ಭೇಟಿ ನೀಡಿರುವ ರಾಹುಲ್ ಗಾಂಧಿ, ಅಲ್ಲಿ ಇರುವವರ ಕಷ್ಟ- ಸುಖಗಳನ್ನು ವಿಚಾರಿಸಿದ್ದಾರೆ. ಇಂದು ಇಂಫಾಲ್‌ನಲ್ಲಿ ಬುದ್ಧಿಜೀವಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ರಾಹುಲ್ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಗುರುವಾರ ಜನಾಂಗೀಯ ಗಲಭೆಯಲ್ಲಿ ಹೆಚ್ಚು ಹಾನಿಗೊಳಗಾದ ಪಟ್ಟಣಗಳಲ್ಲಿ ಒಂದಾದ ಚುರಚಂದಪುರದ ಪರಿಹಾರ ಶಿಬಿರಗಳಿಗೆ ರಾಹುಲ್  ಭೇಟಿ ನೀಡಿದ್ದರು. ಈ ವೇಳೆ ಹೈಡ್ರಾಮವೇ ನಡೆಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಭೀತಿಯಿಂದ ಪೊಲೀಸರು ಬಿಷ್ಣುಪುರದಲ್ಲಿ ತಡೆದಿದ್ದರು.

ತದನಂತರ ರಾಜ್ಯಸರ್ಕಾರದ ಹೆಲಿಕಾಪ್ಟರ್ ನಲ್ಲಿ ಚುರಚಂದಪುರಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ. ನಿನ್ನೆ ರಾತ್ರಿ ಇಂಫಾಲದಲ್ಲಿರುವ ಬಿಜೆಪಿಯ ಪ್ರಾದೇಶಿಕ ಕಚೇರಿ ಬಳಿ ನೆರೆದಿದ್ದ ಗುಂಪನ್ನು  ಚದುರಿಸಲು ಪೊಲೀಸರು ಹಲವು ಸುತ್ತಿನ ಅಶ್ರುವಾಯು ಸಿಡಿಸಿದ ಘಟನೆಯೂ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com