ಉತ್ತರ ಪ್ರದೇಶ: ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ನವದಂಪತಿಗಳ ದುರಂತ ಅಂತ್ಯ!

ನವವಿವಾಹಿತ ವ್ಯಕ್ತಿಯೋರ್ವ ಪತ್ನಿಗೆ ಗುಂಡಿಕ್ಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. 
ಗುಂಡಿನ ದಾಳಿ
ಗುಂಡಿನ ದಾಳಿ
Updated on

ಮುಜಾಫರ್ ನಗರ: ನವವಿವಾಹಿತ ವ್ಯಕ್ತಿಯೋರ್ವ ಪತ್ನಿಗೆ ಗುಂಡಿಕ್ಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. 

ಮಖ್ಯಾಲಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪತ್ನಿಯೊಂದಿಗೆ ಜಗಳವಾಡಿದ ನಂತರ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಜಗಳ ಬಿಡಿಸಲು ಹೋದ ಮತ್ತೋರ್ವ ವ್ಯಕ್ತಿಗೂ ಸಹ ಗುಂಡೇಟು ತಗುಲಿದ್ದು, ಗಾಯಗೊಂಡಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ 2 ಪಿಸ್ತೋಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನಸೀಮ್ ಮಲಿಕ್ ಐದು ತಿಂಗಳ ಹಿಂದೆ ಮಧ್ಯವರ್ತಿ ಸದ್ದಾಂ ಸಹಾಯದಿಂದ 25 ವರ್ಷದ ನರ್ಗೀಸ್ ಅವರನ್ನು ವಿವಾಹವಾಗಿದ್ದರು. ಶುಕ್ರವಾರ, ನಸೀಮ್ ಮತ್ತು ನರ್ಗೀಸ್ ಜಗಳವಾಡಿದ್ದರು, ಮಧ್ಯಸ್ಥಿಕೆಯನ್ನು ಪಡೆಯಲು ಇಬ್ಬರೂ ಸದ್ದಾಂ ಎಂಬಾತನ ಮೊರೆ ಹೋದರು ಆದರೆ ಅವನು ಓಡಿಹೋದ. ಸದ್ದಾಂ ನ ಮನೆಯಲ್ಲಿ ಜಗಳವಾಡುತ್ತಿದ್ದಾಗ ನೆರೆಮನೆಯವನಾದ ಸಬೀರ್ ಎಂಬಾತ ಜಗಳ ಬಿಡಿಸಲು ಹೋಗಿದ್ದ ಆತನ ಮೇಲೆಯೂ ನಸೀಮ್ ದಾಳಿ ಮಾಡಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com