ಇಸ್ರೇಲ್ ಮೇಲೆ ಗಾಜಾ ಉಗ್ರರ ದಾಳಿ: ತನ್ನ ನಾಗರಿಕರಿಗೆ ಸಲಹೆ ಎಚ್ಚರಿಕೆ ಹೊರಡಿಸಿದ ಭಾರತ, ಸಹಾಯಕ್ಕೆ ಈ ಸಂಖ್ಯೆಗೆ ಕರೆ ಮಾಡಿ

ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರದಂದು ಗಾಜಾ ಪಟ್ಟಿಯಿಂದ ಬೃಹತ್ ರಾಕೆಟ್‌ಗಳ ಸುರಿಮಳೆ ಮತ್ತು ಇಸ್ರೇಲ್‌ಗೆ ಹಮಾಸ್ ಭಯೋತ್ಪಾದಕರ ಒಳನುಸುಳುವಿಕೆಯ ನಂತರ ಯುದ್ಧಕ್ಕೆ ಸನ್ನದ್ಧ ಸ್ಥಿತಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತ ಎಚ್ಚೆತ್ತುಕೊಂಡಿದೆ.
ಗಾಜಾ ಪಟ್ಟಿಯಿಂದ ಉಡಾವಣೆಯಾದ ರಾಕೆಟ್ ದಕ್ಷಿಣ ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿರುವ ಮನೆಯೊಂದಕ್ಕೆ ಬಡಿದ ನಂತರ ಹೊಗೆ ಬರುತ್ತಿರುವುದು
ಗಾಜಾ ಪಟ್ಟಿಯಿಂದ ಉಡಾವಣೆಯಾದ ರಾಕೆಟ್ ದಕ್ಷಿಣ ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿರುವ ಮನೆಯೊಂದಕ್ಕೆ ಬಡಿದ ನಂತರ ಹೊಗೆ ಬರುತ್ತಿರುವುದು

ನವದೆಹಲಿ: ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರದಂದು ಗಾಜಾ ಪಟ್ಟಿಯಿಂದ ಬೃಹತ್ ರಾಕೆಟ್‌ಗಳ ಸುರಿಮಳೆ ಮತ್ತು ಇಸ್ರೇಲ್‌ಗೆ ಹಮಾಸ್ ಭಯೋತ್ಪಾದಕರ ಒಳನುಸುಳುವಿಕೆಯ ನಂತರ ಯುದ್ಧಕ್ಕೆ ಸನ್ನದ್ಧ ಸ್ಥಿತಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತ ಎಚ್ಚೆತ್ತುಕೊಂಡಿದೆ.

ಭಾರತವು ಇಂದು ಇಸ್ರೇಲ್‌ನಲ್ಲಿರುವ ತನ್ನ ಪ್ರಜೆಗಳಿಗೆ ಜಾಗರೂಕರಾಗಿರಲು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಗಮನ ಹರಿಸುವಂತೆ ಕೇಳಿಕೊಂಡಿದೆ. 

ಈ ಕುರಿತು ರಾಯಭಾರ ಕಚೇರಿಯು ಇಸ್ರೇಲ್ ನಲ್ಲಿರುವ ಭಾರತೀಯರಿಗೆ, ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ವಿನಂತಿಸಲಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳು ಸಲಹೆ ನೀಡಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸುವಂತೆ ಕೇಳಿಕೊಂಡಿದೆ.

ಅನಗತ್ಯವಾಗಿ ಹೊರಗೆ ಓಡಾಡದಂತೆ ಮತ್ತು ಸುರಕ್ಷತಾ ಕ್ರಮಗಳ ಮೇಲೆ ಹೆಚ್ಚಿನ ನಿಗಾ ಇರಿಸಿ. ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸನ್ನದ್ಧತೆಯ ಕರಪತ್ರವನ್ನು ನೋಡಿ. ತುರ್ತು ಸಂದರ್ಭದಲ್ಲಿ, +97235226748 ನಲ್ಲಿ ಸಂಪರ್ಕಿಸಿ ಅಥವಾ cons1.telaviva@mea.gov.in ನಲ್ಲಿ ಸಂದೇಶವನ್ನು ಕಳುಹಿಸಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಬರುತ್ತಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com