ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಭೇಟಿಯಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಅವರು ಸೋಮವಾರ ಭಾರತೀಯ ಚೆಸ್ ಆಟಗಾರ ರಮೇಶ್‌ಬಾಬು ಪ್ರಗ್ನಾನಂದ ಅವರನ್ನು ಭೇಟಿಯಾದರು. 
ಪ್ರಗ್ನಾನಂದ ಭೇಟಿಯಾದ ಇಸ್ರೋ ಮುಖ್ಯಸ್ಥರು
ಪ್ರಗ್ನಾನಂದ ಭೇಟಿಯಾದ ಇಸ್ರೋ ಮುಖ್ಯಸ್ಥರು
Updated on

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಅವರು ಸೋಮವಾರ ಭಾರತೀಯ ಚೆಸ್ ಆಟಗಾರ ರಮೇಶ್‌ಬಾಬು ಪ್ರಗ್ನಾನಂದ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಜಿಎಸ್ ಎಲ್ ವಿ ರಾಕೆಟ್ ನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿ, ಮುಂಬರುವ ಪಂದ್ಯಗಳಲ್ಲಿ ಅವರ ಯಶಸ್ಸನ್ನು ಬಯಸಿದರು. 

ಪ್ರಗ್ನಾನಂದ ತಮಗೆ ಬಂದಿರುವ ಬಹುಮಾನಗಳನ್ನು ತೋರಿಸಿದರು. ಅಲ್ಲದೇ, ಇಸ್ರೋ ವಿಜ್ಞಾನಿಗಳ ಯಶಸ್ಸು ಮತ್ತು ಭವಿಷ್ಯದ ಮಿಷನ್ ಗಗನಯಾನಕ್ಕೆ  ಶುಭಾಶಯಗಳನ್ನು ವ್ಯಕ್ತಪಡಿಸಿದರು. ಪ್ರಗ್ನಾನಂದ ಅವರ ತಂದೆ ರಮೇಶ್ ಬಾಬು ಕೂಡ ಉಪಸ್ಥಿತರಿದ್ದರು. ಪ್ರಗ್ಯಾನ್ ರೋವರ್ ಈಗ ನಿರಂತರವಾಗಿ ನಿದ್ರಿಸುತ್ತಿದ್ದಾರೆ ಆದರೆ ಮುಂಬರುವ ದಿನಗಳಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಚೆಸ್ ಆಟಗಾರನು ಸಕ್ರಿಯವಾಗಿರಬೇಕು ಎಂದು ಸೋಮನಾಥ್ ಅವರು ಪ್ರಗ್ನಾನಂದ ಅವರಿಗೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, ಪ್ರಗ್ನಾನಂದ ಸಾಧನೆಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಶೀಘ್ರದಲ್ಲೇ ಅವರು ವಿಶ್ವದ ನಂಬರ್ ಒನ್ ಚೆಸ್ ಆಟಗಾರನಾಗಲಿ ಎಂದು ಹಾರೈಸಿದರು. ಪ್ರಗ್ನಾನಂದ ನೆಲದ ಮೇಲಿದ್ದರೆ ಇಸ್ರೋ ಚಂದ್ರನ ಮೇಲೆ ಪ್ರಗ್ಯಾನ್ ಹೊಂದಿದೆ. ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರ ಉತ್ತೇಜಿಸಲು  ಪ್ರಗ್ನಾನಂದ ಅವರು ಬಾಹ್ಯಾಕಾಶ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಾರೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com