ಸಮುದ್ರ ಕಾರ್ಯಾಚರಣೆ ವೇಳೆ ದುರಂತ: ಐಎನ್‌ಎಸ್ ಬ್ರಹ್ಮಪುತ್ರದ ಭಾರತೀಯ ನೌಕಾಪಡೆ ಅಧಿಕಾರಿ ಸಾವು!

ಸಮುದ್ರದಲ್ಲಿ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ಭಾರತೀಯ ನೌಕಾಪಡೆ ಅಧಿಕಾರಿ ಸಾವು
ಭಾರತೀಯ ನೌಕಾಪಡೆ ಅಧಿಕಾರಿ ಸಾವು

ನವದೆಹಲಿ: ಸಮುದ್ರದಲ್ಲಿ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.

ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ನಿಯೋಜನೆಗೊಂಡ 23 ವರ್ಷದ ಜವಾನ ಕೂಡ ಸಮುದ್ರದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಸಾವನ್ನಪ್ಪಿದ್ದು, ಈ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ಸಮುದ್ರದಲ್ಲಿ ಕಾರ್ಯಾಚರಣೆಯ ವೇಳೆ ಕ್ಷಿಪಣಿ ಹೊಂದಿದ ಹಡಗಿನಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಭಾನುವಾರ ಈ ಮಾಹಿತಿ ನೀಡಿದ್ದಾರೆ.

ಮೃತರನ್ನು 23 ವರ್ಷದ ನೌಕಾಪಡೆ ಅಧಿಕಾರಿ ಮೋಹಿತ್ ಎಂದು ಗುರುತಿಸಲಾಗಿದ್ದು, ಅವರನ್ನು ಕ್ಷಿಪಣಿ ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ಪೋಸ್ಟ್ ಮಾಡಲಾಗಿತ್ತು. ಮೋಹಿತ್ 'ಪ್ಲೋವ್ ಆರ್ಟಿಫೈಸರ್ 4' ಶ್ರೇಣಿಯ ಅಧಿಕಾರಿ ಎಂದು ತಿಳಿದುಬಂದಿದ್ದು, ಈ ಶ್ರೇಣಿಯು ಸಣ್ಣ ಅಧಿಕಾರಿಗೆ ಸಮಾನವಾಗಿರುತ್ತದೆ.

ಏಪ್ರಿಲ್ 8 ರಂದು ಸಮುದ್ರದಲ್ಲಿ ನಡೆದ ಘಟನೆಯಲ್ಲಿ, 23 ವರ್ಷದ ಮೋಹಿತ್, INS ಬ್ರಹ್ಮಪುತ್ರ, ಸಮುದ್ರದಲ್ಲಿ ಕಾರ್ಯಾಚರಣೆ ಮಾಡುವಾಗ ಉಂಟಾದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಎಲ್ಲಾ ನೌಕಾಪಡೆಯ ಸಿಬ್ಬಂದಿ ಮೋಹಿತ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದು ನೌಕಾಪಡೆ ಟ್ವೀಟ್‌ನಲ್ಲಿ ತಿಳಿಸಲಾಗಿದೆ.  

ಮತ್ತೊಂದು ನೌಕಾಪಡೆ ದುರಂತ
ಈ ಹಿಂದೆಯೂ ಕೂಡ ಇಂತಹುದೇ ದುರಂತ ಸಂಭವಿಸಿತ್ತು. ಪಶ್ಚಿಮ ಬಂಗಾಳದ ಪನಗಢ್‌ನಲ್ಲಿ ತರಬೇತಿಯ ವೇಳೆ ನೌಕಾಪಡೆಯ ಮೆರೈನ್ ಕಮಾಂಡೋ ಗೋವಿಂದ್ ಸಾವನ್ನಪ್ಪಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com