ಯುಪಿಎ ಕಾಲದಲ್ಲಿ 'ಬಿಜಿಲಿ ಆಯೇಗಿ, ಟಾಯ್ಲೆಟ್ ಬನೇಗಾ ಎನ್ನುತ್ತಿದ್ದರು; ಈಗ ಹೋ ಗಯಾ' ಎನ್ನುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

ಯುಪಿಎ ಸರಕಾರ ಯೋಜನೆಗಳನ್ನು ಆರಂಭಿಸುವುದಾಗಿ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದು, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಉತ್ತರಿಸಿದ ನಿರ್ಮಲಾ ಸೀತಾರಾಮನ್
ಲೋಕಸಭೆಯಲ್ಲಿ ಉತ್ತರಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಯುಪಿಎ ಸರಕಾರ ಯೋಜನೆಗಳನ್ನು ಆರಂಭಿಸುವುದಾಗಿ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದು, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ ವಿದ್ಯುತ್ ಸೌಲಭ್ಯಗಳಿಂದ ಹಿಡಿದು ಶೌಚಾಲಯದವರೆಗೆ ಬಿಜೆಪಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿದೆ. ಆದ್ದರಿಂದ, ಭಾರತವು ಈಗ ತನ್ನ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಧನಾತ್ಮಕವಾಗಿರುವ ಅಪರೂಪದ ಸ್ಥಾನದಲ್ಲಿದೆ ಎಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸುತ್ತಾ ವಿತ್ತ ಸಚಿವೆ ಮಾತನಾಡಿದರು. 

"2013 ರಲ್ಲಿ, ಮೋರ್ಗನ್ ಸ್ಟಾನ್ಲಿ ಭಾರತವನ್ನು ವಿಶ್ವದ ಐದು ದುರ್ಬಲ ಆರ್ಥಿಕತೆಯ ಪಟ್ಟಿಯಲ್ಲಿ ಸೇರಿಸಿದ್ದರು. ಭಾರತ ದೇಶವನ್ನು ದುರ್ಬಲ ಆರ್ಥಿಕ ದೇಶ ಎಂದು ಘೋಷಿಸಲಾಗಿತ್ತು. ಇಂದು ಅದೇ ಮಾರ್ಗನ್ ಸ್ಟಾನ್ಲಿ ಭಾರತವನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ರೇಟಿಂಗ್ ನೀಡಿದೆ. ಕೇವಲ 9 ವರ್ಷಗಳಲ್ಲಿ, ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ನಮ್ಮ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆಯು ಏರಿಕೆಯಾಗಿ ಅಭಿವೃದ್ಧಿ ಕಂಡಿದೆ. ಇಂದು ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ ಎಂಬ ಕೀರ್ತಿಗೆ ಭಾಜನರಾಗಿದ್ದೇವೆ ಎಂದರು. 

ನಾವು ಕನಸುಗಳನ್ನು ನನಸಾಗಿಸಿಕೊಳ್ಳುತ್ತೇವೆ: ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ ಸೀತಾರಾಮನ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಕೇವಲ ಭರವಸೆಗಳನ್ನು ನೀಡಲಾಗುತ್ತಿತ್ತೇ ಹೊರತು ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ದೇಶದಲ್ಲಿ ಪರಿವರ್ತನೆಯು ಜನರಿಗೆ ಹಂಚಿಕೆಯಾದಾಗ ಬರುತ್ತದೆ ಹೊರತು ಮಾತನಾಡುವ ಪದಗಳ ಮೂಲಕ ಅಲ್ಲ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ಅವರ ಕನಸುಗಳನ್ನು ನಾವು ನನಸು ಮಾಡಿದ್ದೇವೆ. ಎಲ್ಲರನ್ನೂ ಸಶಕ್ತೀಕರಣಗೊಳಿಸುವುದರಲ್ಲಿ ನಂಬಿಕೆ ಹೊಂದಿದ್ದೇವೆಯೇ ಹೊರತು ತುಷ್ಠೀಕರಣ ರಾಜಕೀಯದಿಂದಲ್ಲ ಎಂದರು.

ಮೋರ್ಗನ್ ಸ್ಟಾನ್ಲಿ ಭಾರತದ ಉನ್ನತೀಕರಣ: ಜಾಗತಿಕ ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟಾನ್ಲಿ ಬಿಡುಗಡೆ ಮಾಡಿದ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಭಾರತವನ್ನು ಉನ್ನತ ಸ್ಥಾನಕ್ಕೇರಿಸಿದೆ. ಚೀನಾದ ರೇಟಿಂಗ್ ನ್ನು ಸಮಾನ ತೂಕಕ್ಕೆ ಇಳಿಸಿದೆ. 2013ರಲ್ಲಿ ಮೋರ್ಗನ್ ಸ್ಟಾನ್ಲಿ ಐದು ಅತ್ಯಂತ ದುರ್ಬಲ ಆರ್ಥಿಕತೆಗಳಲ್ಲಿ ಭಾರತವನ್ನು ಹೆಸರಿಸಿದೆ. ಜಗತ್ತಿನಲ್ಲಿ. ಅದೇ ಮೋರ್ಗನ್ ಸ್ಟಾನ್ಲಿ ಭಾರತವನ್ನು ನವೀಕರಿಸುತ್ತದೆ ಮತ್ತು ಇಂದು ನಮಗೆ ಹೆಚ್ಚಿನ ರೇಟಿಂಗ್ ನೀಡುತ್ತದೆ.

ನಮ್ಮ ಸರ್ಕಾರದ ನೀತಿಗಳು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವಂತೆ ಮಾಡಿದೆ ಎಂದು ಹೇಳಿದರು. 
"ಬನೇಗಾ, ಮಿಲೇಗಾ" ಪದಗಳು ಈಗ ಬಳಕೆಯಲ್ಲಿಲ್ಲ. ಈ ದಿನಗಳಲ್ಲಿ ಜನರು ಏನು ಬಳಸುತ್ತಿದ್ದಾರೆ? ಬನ್ ಗಯೇ, ಮಿಲ್ ಗಯೇ, ಆ ಗಯೇ'. ಯುಪಿಎ ಅವಧಿಯಲ್ಲಿ ಜನರು 'ಬಿಜ್ಲಿ ಆಯೇಗಿ' ಎಂದು ಹೇಳುತ್ತಿದ್ದರು. ಈಗ ಜನರು 'ಬಿಜ್ಲಿ ಆ ಗಯಿ' ಎಂದು ಹೇಳುತ್ತಾರೆ. ಆಗ 'ಗ್ಯಾಸ್ ಕನೆಕ್ಷನ್ ಮಿಲೇಗಾ' ಎನ್ನುತ್ತಿದ್ದವರು, ಈಗ 'ಗ್ಯಾಸ್ ಕನೆಕ್ಷನ್ ಮಿಲ್ ಗಯಾ'... ಅಂದು ಏರ್ ಪೋರ್ಟ್ 'ಬನೇಗಾ' ಎನ್ನುತ್ತಿದ್ದವರು ಈಗ ಏರ್ ಪೋರ್ಟ್ 'ಬನ್ ಗಯಾ' ಎನ್ನುತ್ತಿದ್ದಾರೆ ಎಂದರು. 

ಯುಪಿಎ ಹೆಸರಿಗೆ ವಿಶ್ವಾಸಾರ್ಹತೆ ಇಲ್ಲ: ‘ಯುಪಿಎ’ ಎಂಬ ಹೆಸರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲದಿರುವುದರಿಂದ ಪ್ರತಿಪಕ್ಷಗಳು ಅದನ್ನು ಐಎನ್‌ಡಿಐಎ ಎಂದು ಬದಲಾಯಿಸಲು ನಿರ್ಧರಿಸಿವೆ ಎಂದು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಟೀಕಿಸಿದರು. ಯುಪಿಎ ಇಡೀ ದಶಕವನ್ನು ವ್ಯರ್ಥ ಮಾಡಿದೆ, ಆದರೆ ಪ್ರತಿ ಬಿಕ್ಕಟ್ಟು ಈಗ ಸುಧಾರಣೆಗೆ ಬದಲಾಗಿದೆ. ಎನ್‌ಡಿಎ ಅಡಿಯಲ್ಲಿ, ನಾವು ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರವನ್ನು ಕಂಡಿದ್ದೇವೆ ಎಂದು  ಹೇಳಿದರು.

INDIA ಮೈತ್ರಿಕೂಟವೆಂಬುದು ವಿಲಕ್ಷಣ ಒಕ್ಕೂಟವಾಗಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಜಗಳವಾಡುತ್ತಿವೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ, ಎಡಪಂಥೀಯ ಮತ್ತು ಕಾಂಗ್ರೆಸ್‌ ಪಕ್ಷಗಳು ಜಗಳವಾಡುತ್ತಿವೆ. ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳು ಜಗಳವಾಡುತ್ತಿವೆ. ಜಮ್ಮುವಿನಲ್ಲಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಜಗಳವಾಡುತ್ತಿವೆ.ಹೀಗಿರುವಾಗ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಅರ್ಥವೇನಿದೆ ಎಂದು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com