ಮಣಿಪುರ ಹಿಂಸಾಚಾರ: ಸಿಬಿಐಗೆ ವರ್ಗಾಯಿಸಿದ ಪ್ರಕರಣಗಳ ಅಸ್ಸಾಂ ಹೈಕೋರ್ಟ್ ಗೆ ವರ್ಗ, ನ್ಯಾಯಾಧೀಶರ ನಾಮನಿರ್ದೇಶನಕ್ಕೆ ಸಿಜೆಐಗೆ ಸುಪ್ರೀಂ ಸೂಚನೆ
ಮಣಿಪುರ ಹಿಂಸಾಚಾರದ ಸಿಬಿಐ ಪ್ರಕರಣಗಳನ್ನು ಅಸ್ಸಾಂನ ಗುವಾಹತಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರ ನಾಮನಿರ್ದೇಶನ ಮಾಡಲು ಗುವಾಹತಿ ಹೈಕೋರ್ಟ್ ಸಿಜೆಐಗೆ ಸೂಚನೆ ನೀಡಿದೆ.
Published: 25th August 2023 02:09 PM | Last Updated: 25th August 2023 02:09 PM | A+A A-

ಸುಪ್ರೀಂಕೋರ್ಟ್
ಇಂಫಾಲ: ಮಣಿಪುರ ಹಿಂಸಾಚಾರದ ಸಿಬಿಐ ಪ್ರಕರಣಗಳನ್ನು ಅಸ್ಸಾಂನ ಗುವಾಹತಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರ ನಾಮನಿರ್ದೇಶನ ಮಾಡಲು ಗುವಾಹತಿ ಹೈಕೋರ್ಟ್ ಸಿಜೆಐಗೆ ಸೂಚನೆ ನೀಡಿದೆ.
ಮಣಿಪುರ ಹಿಂಸಾಚಾರದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ ನಡೆದಿದ್ದು, ಸಿಬಿಐಗೆ ವರ್ಗಾಯಿಸಿದ ಪ್ರಕರಣಗಳ ವಿಚಾರಣೆ ಗುವಾಹಟಿಯಲ್ಲಿ ನಡೆಯಲಿದೆ. ಪ್ರಕರಣದ ವಿಚಾರಣೆಗಳಲ್ಲೆವೂ ಆನ್ಲೈನ್ ಮೋಡ್ನಲ್ಲಿ ಇರಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಇದನ್ನೂ ಓದಿ: ಮಣಿಪುರ: ಮಯನ್ಮಾರ್ ಗೆ ಪಲಾಯನ ಮಾಡಿದ್ದ 200ಕ್ಕೂ ಹೆಚ್ಚು ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ- ಸಿಎಂ ಬಿರೇನ್ ಸಿಂಗ್
ಮಣಿಪುರದ ನ್ಯಾಯಾಲಯಗಳಲ್ಲಿನ ಅಂತರ ಮತ್ತು ಭದ್ರತಾ ಸಮಸ್ಯೆಗಳೆರಡನ್ನೂ ಗಮನದಲ್ಲಿಟ್ಟುಕೊಂಡು, ಹಿಂಸಾಚಾರದ ಆರೋಪಿಗಳ ಹಾಜರಾತಿ, ಬಂಧನ, ನ್ಯಾಯಾಂಗ ಬಂಧನ ವಿಸ್ತರಣೆ ಮತ್ತು ಇತರ ಪ್ರಕ್ರಿಯೆಗಳ ಎಲ್ಲಾ ಅರ್ಜಿಗಳನ್ನು ಆನ್ಲೈನ್ ಮೋಡ್ನಲ್ಲಿ ನಡೆಸಲಾಗುವುದು ಎಂದು ನ್ಯಾಯಾಲಯ ಆದೇಶಿಸಿದ್ದು ಮಾತ್ರವಲ್ಲದೇ ಮಣಿಪುರದಲ್ಲಿ ನ್ಯಾಯಾಂಗ ಬಂಧನಕ್ಕೆ ಅವಕಾಶ ನೀಡುವುದಾಗಿ ನ್ಯಾಯಾಲಯ ತಿಳಿಸಿದೆ.
ಇದಲ್ಲದೇ ಮಣಿಪುರ ಹಿಂಸಾಚಾರ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಿದ ಪ್ರಕರಣವನ್ನು ಅಸ್ಸಾಂನ ರಾಜಧಾನಿ ಗುವಾಹತಿ ಹೈಕೋರ್ಟ್ ನಲ್ಲಿ ನಡೆಸಲಾಗುವುದು. ಒಬ್ಬರು ಅಥವಾ ಹೆಚ್ಚಿನ ನ್ಯಾಯಮೂರ್ತಿಗಳಿಗೆ ಜವಾಬ್ದಾರಿಯನ್ನು ನಿಯೋಜಿಸುವಂತೆ ಸುಪ್ರೀಂ ಕೋರ್ಟ್ ಗುವಾಹತಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು ಕೇಳಿದೆ. ಆನ್ಲೈನ್ ಮೋಡ್ನಲ್ಲಿ ವಿಷಯವನ್ನು ಆಲಿಸಲಾಗುವುದು. ಎಲ್ಲ ಆರೋಪಿಗಳು ಮಣಿಪುರ ಜೈಲಿನಲ್ಲಿ ಉಳಿಯುತ್ತಾರೆ ಮತ್ತು CrPC 164 ಸಾಕ್ಷಿಗಳ ಹೇಳಿಕೆಯನ್ನು ಮಣಿಪುರದ ಮ್ಯಾಜಿಸ್ಟ್ರೇಟ್ ದಾಖಲಿಸುತ್ತಾರೆ. ಗುವಾಹತಿ ನ್ಯಾಯಾಲಯಗಳಲ್ಲಿ ಆನ್ಲೈನ್ ಮೂಲಕ ಸಿಬಿಐ ಪ್ರಕರಣಗಳ ವಿಚಾರಣೆಗೆ ಅನುಕೂಲವಾಗುವಂತೆ ಉತ್ತಮ ಇಂಟರ್ನೆಟ್ ಸೇವೆಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಮಣಿಪುರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಸಿಬಿಐ ತನಿಖೆ ಚುರುಕು; 29 ಮಹಿಳಾ ಅಧಿಕಾರಿಗಳು ಸೇರಿದ 53 ಅಧಿಕಾರಿಗಳ ತಂಡ ನಿಯೋಜನೆ!
ಮಣಿಪುರದಲ್ಲಿ ಜಾತಿ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಆಗಸ್ಟ್ 21 ರಂದು ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯನ್ನು ನೇಮಿಸಿತ್ತು.
ಕುಕಿ ಸಮುದಾಯದ ಪರವಾಗಿ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ವಾದ ಮಂಡಿಸಿದರು. ನ್ಯಾಯಾಲಯದಲ್ಲಿನ ವಿಚಾರಣೆಯನ್ನು ಅಸ್ಸೋಂಗೆ ವರ್ಗಾಯಿಸುವುದನ್ನು ಗೊನ್ಸಾಲ್ವೆಸ್ ವಿರೋಧಿಸಿದರು ಮತ್ತು ಸಂತ್ರಸ್ತರು ಬೆಟ್ಟ ಗುಡ್ಡ ಪ್ರದೇಶಗಳಿಂದ ಬಂದವರಾಗಿರುವುದರಿಂದ ವಿಚಾರಣೆಯನ್ನು ಚುರಚಂದ್ಪುರದಲ್ಲಿ ನಡೆಸಬೇಕು ಮತ್ತು ಅವರು ವಿಚಾರಣೆಗೆ ಬೇರೆ ರಾಜ್ಯಕ್ಕೆ ಹೋಗುವ ಅಗತ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಲೂಟಿ ಮಾಡಿದ 6,000 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ: ಗೊಗೊಯ್
ಎರಡೂ ಸಮುದಾಯದಲ್ಲೂ ಸಂತ್ರಸ್ಥರಿದ್ದಾರೆ: ಸುಪ್ರೀಂ ಕೋರ್ಟ್
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಕಣಿವೆ ಮತ್ತು ಗುಡ್ಡ ಪ್ರದೇಶಗಳೆರಡರಲ್ಲೂ ಜನರು ಸಂಕಷ್ಟ ಅನುಭವಿಸಿದ್ದಾರೆ. ನೋವು ಅನುಭವಿಸಿದ ಕಣಿವೆ ಜನರು ಇನ್ನೊಂದು ಬದಿಗೆ ಹೋಗಲು ಕಷ್ಟಪಡುತ್ತಾರೆ. ಎರಡೂ ಸಮುದಾಯದಲ್ಲಿರುವ ಜನರು ನೋವನ್ನು ಎದುರಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸೇರಿದಂತೆ 10 ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಜನಾಂಗೀಯ ಸಂಘರ್ಷದಲ್ಲಿ ಮಣಿಪುರದ ಅನೇಕ ಜನರು ತಮ್ಮ ಗುರುತಿನ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಆಧಾರ್ ಕಾರ್ಡ್ಗಳನ್ನು ನೀಡಲು ಯುಐಡಿಎಐ ಸೇರಿದಂತೆ ರಾಜ್ಯ ಸರ್ಕಾರ ಮತ್ತು ಇತರರಿಗೆ ಹಲವಾರು ನಿರ್ದೇಶನಗಳನ್ನು ರವಾನಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಸರ್ವೊಚ್ಚ ನ್ಯಾಯಾಲಯಕ್ಕೆ ಒತ್ತಾಯಿಸಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ; ಸಮಸ್ಯೆಗಳನ್ನು ಪರಿಹರಿಸಲು ಶಾಂತಿ ಏಕೈಕ ಮಾರ್ಗ- ಪ್ರಧಾನಿ ಮೋದಿ
ವೈರಲ್ ವಿಡಿಯೋ ಪ್ರಕರಣ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಅನೇಕ ಮಣಿಪುರ ನಿವಾಸಿಗಳು ಜನಾಂಗೀಯ ಕಲಹದಲ್ಲಿ ತಮ್ಮ ಗುರುತಿನ ದಾಖಲೆಗಳನ್ನು ಕಳೆದುಕೊಂಡಿರಬಹುದು ಎಂದು ಗಮನಿಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಆಧಾರ್ ಕಾರ್ಡ್ಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಯುಐಡಿಎಐ ಸೇರಿದಂತೆ ಇತರರಿಗೆ ನಿರ್ದೇಶನಗಳನ್ನು ರವಾನಿಸಲು ಉನ್ನತ ನ್ಯಾಯಾಲಯವನ್ನು ಒತ್ತಾಯಿಸಿದೆ.