ಕಣಿವೆ ನಾಡಿನಲ್ಲಿ ಲಿಥಿಯಂ ನಿಕ್ಷೇಪ ಪತ್ತೆ: ಜಮ್ಮು-ಕಾಶ್ಮೀರ, ಭಾರತದ ಅಭಿವೃದ್ಧಿಯ ಗೇಮ್ ಚೇಂಜರ್ ಆಗುತ್ತಾ 'ಬಿಳಿ ಚಿನ್ನ'!

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳ ಆವಿಷ್ಕಾರವು ದೇಶಕ್ಕೆ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಭಾರೀ ಬದಲಾವಣೆ ತರಲಿದೆ, ಇದು ಜಮ್ಮು ಕಾಶ್ಮೀರ ಜನರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.
ರಿಯಾಸಿಯಲ್ಲಿ ಪತ್ತೆಯಾದ ಲಿಥಿಯಂ
ರಿಯಾಸಿಯಲ್ಲಿ ಪತ್ತೆಯಾದ ಲಿಥಿಯಂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳ ಆವಿಷ್ಕಾರವು ದೇಶಕ್ಕೆ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಭಾರೀ ಬದಲಾವಣೆ ತರಲಿದೆ, ಇದು ಜಮ್ಮು ಕಾಶ್ಮೀರ ಜನರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ಲಕ್ಷ ಟನ್ ಲಿಥಿಯಂ ಇದೆ ಎಂದು ಅಂದಾಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಸಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಲಿಥಿಯಂ ಅನ್ನು ಪತ್ತೆ ಮಾಡಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ. ಅಂತಹ ಬೃಹತ್ ಲಿಥಿಯಂ ನಿಕ್ಷೇಪವು ಭಾರತದ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬ ಚರ್ಚೆ ಸದ್ಯ ನಡೆಯುತ್ತಿದೆ.

ಚಿಲಿಯ ನಂತರ ಜಗತ್ತಿನಲ್ಲಿ ಲಿಥಿಯಂ ಇರುವ ಎರಡನೇ ಸ್ಥಾನದಲ್ಲಿದ್ದೇವೆ. ಇದು ಭಾರತ ಮತ್ತು ಕಣಿವೆ ರಾಜ್ಯಗಳಿಗೆ ಬದಲಾವಣೆ ತಂದಿದೆ" ಎಂದು ಭೂವಿಜ್ಞಾನ ಮತ್ತು ಗಣಿಗಾರಿಕೆ ಕಾರ್ಯದರ್ಶಿ ಅಮಿತ್ ಶರ್ಮಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ನಿಕ್ಷೇಪಗಳನ್ನು ಪತ್ತೆ ಮಾಡಿದೆ. ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಪ್ರಸ್ತುತ, ಚಿಲಿಯು 9.2 ಮಿಲಿಯನ್ ಟನ್‌ಗಳಲ್ಲಿ ವಿಶ್ವದ ಅತಿದೊಡ್ಡ ಲಿಥಿಯಂ ನಿಕ್ಷೇಪಗಳನ್ನು ಹೊಂದಿದೆ, ನಂತರ ಆಸ್ಟ್ರೇಲಿಯಾ (5.7 ಮಿಲಿಯನ್ ಟನ್‌ಗಳು), ಅರ್ಜೆಂಟೀನಾ (2.2 ಮಿಲಿಯನ್ ಟನ್‌ಗಳು), ಮತ್ತು ಚೀನಾ (1.5 ಮಿಲಿಯನ್ ಟನ್‌ಗಳು).

ಲಿಥಿಯಂ ನಿಕ್ಷೇಪಗಳ ಆವಿಷ್ಕಾರದೊಂದಿಗೆ ಭಾರತವು ಲಿಥಿಯಂ ನಿಕ್ಷೇಪಗಳನ್ನು ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಮಾತ್ರ ಸೇರ್ಪಡೆಗೊಂಡಿದೆ ಎಂದು ಶರ್ಮಾ ಹೇಳಿದರು. "ಲಿಥಿಯಂ ನಿಕ್ಷೇಪಗಳನ್ನು ಹೊಂದಿರುವ ಗಣ್ಯ ರಾಷ್ಟ್ರಗಳ ಜಾಗತಿಕ ನಕ್ಷೆಯನ್ನು ನಾವು ನಮೂದಿಸಿದ್ದೇವೆ". ಲಿಥಿಯಂ ಎನ್ನುವುದು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಡಿಜಿಟಲ್ ಕ್ಯಾಮೆರಾಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳಲ್ಲಿ ಬಳಸುವ ರಾಸಾಯನಿಕ ಅಂಶವಾಗಿದೆ. ಇದನ್ನು "ಬಿಳಿ ಚಿನ್ನ" ಎಂಬ ಇನ್ನೊಂದು ಹೆಸರಿನಿಂದಲೂ ಕರೆಯಲಾಗುತ್ತದೆ.

"ಇದು ನಮ್ಮನ್ನು ಸ್ವಾವಲಂಬನೆಗೆ (ಆತಮ್ ನಿರ್ಬರ್ ಭಾರತ್) ಕೊಂಡೊಯ್ಯುತ್ತದೆ, ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ" ಎಂದು ಶರ್ಮಾ ಹೇಳಿದರು. ಆರ್ಥಿಕತೆಯು ದೊಡ್ಡ ಉತ್ತೇಜನವನ್ನು ಪಡೆಯುವುದರಿಂದ ಇದು ಜೆ & ಕೆ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. "ಇದು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಬಹಳಷ್ಟು ಬೊಕ್ಕಸವನ್ನು ತರುತ್ತದೆ".

ಭಾರತವು ಜಿ-20ಯಲ್ಲಿ ಅಧ್ಯಕ್ಷೀಯ ಸ್ಥಾನ ಹೊಂದಿರುವುದರಿಂದ, ಈ ಆವಿಷ್ಕಾರವು ದೇಶದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ. ಲಿಥಿಯಂ ಹೊರತೆಗೆಯುವಿಕೆ ಪ್ರಾರಂಭವಾದ ನಂತರ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಲಿಥಿಯಂ ಹೊರತೆಗೆಯುವಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಆತಂಕದ ಬಗ್ಗೆ ವಿವರಿಸಿದ ಅವರು, “ಹೊರತೆಗೆಯುವ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.. ರಿಯಾಸಿಯಲ್ಲಿ ಲಿಥಿಯಂ ಇರುವಿಕೆಯ ಬಗ್ಗೆ ಜಿಎಸ್‌ಐ ವಿವರವಾದ ವರದಿಯನ್ನು ಸಲ್ಲಿಸಿದ ಸುಮಾರು 26 ವರ್ಷಗಳ ನಂತರ ಈ ಆವಿಷ್ಕಾರವು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com