ತೆಲಂಗಾಣ: ಹಳಿತಪ್ಪಿದ ಗೋದಾವರಿ ಎಕ್ಸ್ ಪ್ರೆಸ್ ರೈಲು

ವಿಶಾಖಪಟ್ಟಣಂ-ಸಿಕಂದರಾಬಾದ್ ನಡುವೆ ಸಂಚರಿಸುತ್ತಿದ್ದ ಗೋದಾವರಿ ಎಕ್ಸ್ ಪ್ರೆಸ್ ರೈಲು ಹೈದರಾಬಾದ್ ಬಳಿ ಹಳಿತಪ್ಪಿದೆ.
ಗೋದಾವರಿ ಎಕ್ಸ್ ಪ್ರೆಸ್ ರೈಲು
ಗೋದಾವರಿ ಎಕ್ಸ್ ಪ್ರೆಸ್ ರೈಲು

ವಿಶಾಖಪಟ್ಟಣಂ-ಸಿಕಂದರಾಬಾದ್ ನಡುವೆ ಸಂಚರಿಸುತ್ತಿದ್ದ ಗೋದಾವರಿ ಎಕ್ಸ್ ಪ್ರೆಸ್ ರೈಲು ಹೈದರಾಬಾದ್ ಬಳಿ ಹಳಿತಪ್ಪಿದೆ.
 
ಬಿಬಿನಗರ್-ಘಟ್ಕೆಸರ್ ನಡುವೆ ಹಳಿತಪ್ಪಿದ್ದು, ಅದೃಷ್ಟವಶಾತ್ ಈ ವರೆಗೂ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. 

ಅಧಿಕಾರಿಗಳ ಮಾಹಿತಿಯ ಪ್ರಕಾರ, ಎಸ್-1, ಎಸ್-4 ಜಿಎಸ್ ಹಾಗೂ ಎಸ್ಎಲ್ಆರ್ ಕೋಚ್ ಗಳು ಹಳಿತಪ್ಪಿದ್ದು, ಪ್ರಯಾಣಿಕರಿಗೆ ಗಾಯಗಳು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಬೆನ್ನಲ್ಲೇ ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸಲಾಗಿದ್ದು, ಎಸ್ ಸಿಆರ್ ಪ್ರಯಾಣಿಕರ ಬಗ್ಗೆ ಮಾಹಿತಿಗಾಗಿ ಹೆಲ್ಪ್ ಲೈನ್ ನಂಬರ್ 040 27786666 ನ್ನು ಪ್ರಾರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com