ಉತ್ತರಪ್ರದೇಶದಲ್ಲಿ ದಟ್ಟ ಮಂಜು: ರೈಲಿಗೆ ಸಿಲುಕಿದ ಮಹಿಳೆಯ ಎರಡೂ ಕಾಲುಗಳು ಕಟ್!

ದಟ್ಟ ಮಂಜಿನ ಕಾರಣ ರೈಲ್ವೆ ಹಳಿ ದಾಟುವಾಗ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸುಲ್ತಾನಪುರ: ದಟ್ಟ ಮಂಜಿನ ಕಾರಣ ರೈಲ್ವೆ ಹಳಿ ದಾಟುವಾಗ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಯೋಧ್ಯೆ-ಪ್ರಯಾಗ್‌ರಾಜ್ ರೈಲ್ವೆ ಮಾರ್ಗದಲ್ಲಿ ಈ ಘಟನೆ ನಡೆದಿದೆ. ರೈಲಿಗೆ ಸಿಲುಕಿದ 40 ವರ್ಷದ ಮಹಿಳೆ ಸತ್ನಾ ನಿಶಾದ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸತ್ನಾ ನಿಶಾದ್ ರೈಲ್ವೆ ಹಳಿಗಳನ್ನು ದಾಟುವಾಗ, ದಟ್ಟವಾದ ಮಂಜಿನಿಂದಾಗಿ ರೈಲು ಬರುತ್ತಿರುವುದು ಕಾಣದೆ ರೈಲಿಗೆ ಸಿಲುಕಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಮ್ ಆಶಿಶ್ ಉಪಾಧ್ಯಾಯ ತಿಳಿಸಿದ್ದಾರೆ. 

ಸತ್ನಾ ನಿಶಾದ್ ರ ಎರಡೂ ಕಾಲುಗಳು ತುಂಡಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com