ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಎನ್‌ಕೌಂಟರ್‌: ಮಾವೋವಾದಿ ನಾಯಕ ಹಿದ್ಮಾ ಹತ್ಯೆ

ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ನಾಯಕ ಮದ್ವಿ ಹಿದ್ಮಾ (42) ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮದ್ವಿ ಹಿದ್ಮಾ
ಮದ್ವಿ ಹಿದ್ಮಾ

ಹೈದರಾಬಾದ್: ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ನಾಯಕ ಮದ್ವಿ ಹಿದ್ಮಾ (42) ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಆತನ ಸಾವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲವಾದರೂ, ಛತ್ತೀಸ್‌ಗಢ ವಲಯದ ಪೊಲೀಸ್ ಐಜಿ ಕಚೇರಿ, ಸಿಆರ್‌ಪಿಎಫ್‌ನ ಕೋಬ್ರಾ ಬೆಟಾಲಿಯನ್ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಭದ್ರತಾ ಪಡೆಗಳು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆಎಂದು ವರದಿಯಾಗಿದೆ. ಹಿದ್ಮಾ ಸಾವಿನೊಂದಿಗೆ, ಮಾವೋವಾದಿ ಸಂಘಟನೆಯು ಪ್ರಬಲ ನಾಯಕ ನ್ನು ಕಳೆದುಕೊಂಡಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯನಾದ್ದ ಹಿದ್ಮಾ ಗೆರಿಲ್ಲಾ ಕಾರ್ಯಾಚರಣೆಯಲ್ಲಿ ಪರಿಣಿತರಾಗಿದ್ದ .1996ರಲ್ಲಿ ಮಾವೋವಾದಿ ಸಂಘಟನೆಗೆ ಸೇರಿದ್ದ. ಏಪ್ರಿಲ್ 2021 ರಲ್ಲಿ 22 ಭದ್ರತಾ ಸಿಬ್ಬಂದಿಯನ್ನು ಕೊಂದ ದಾಳಿಯಲ್ಲಿ ಪ್ರಮುಖ ಶಂಕಿತರಾಗಿದ್ದ ಈತನನ್ನು ಹಿಡಿದುಕೊಟ್ವವರಿಗೆ 45 ಲಕ್ಷ ರು ಬಹುಮಾನ ಘೋಷಿಸಲಾಗಿತ್ತು.

ಬಿಜಾಪುರ ಮತ್ತು ಸುಕ್ಮಾ ಪ್ರದೇಶಗಳಲ್ಲಿ ಪಡೆಗಳ ವಿರುದ್ಧದ ಅನೇಕ ಇತರ ದಾಳಿಗಳಲ್ಲಿ ಅವರು ಶಂಕಿತನಾಗಿದ್ದ. ಎನ್‌ಕೌಂಟರ್‌ನಲ್ಲಿ ಆರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ,  ಆದರೆಅಧಿಕಾರಿಗಳು ಅದನ್ನು ಇನ್ನೂ ಖಚಿತಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com