ದೆಹಲಿ: ಭಾರತೀಯ ರೈಲ್ವೆ ಸೇವೆಯ ಇಂಜಿನಿಯರ್ಸ್ ವಿಭಾಗದ ಅಧಿಕಾರಿಯನ್ನು ಲಂಚ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ.
ಜಿತೇಂದ್ರ ಪಾಲ್ ಸಿಂಗ್ ಬಂಧನಕ್ಕೊಳಗಾಗಿರುವ ಅಧಿಕಾರಿಯಾಗಿದ್ದು, ಗುವಾಹಟಿಯಲ್ಲಿ ಹೆಚ್ಚುವರಿ ವಿಭಗೀಯ ರೈಲ್ವೆ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಜಿತೇಂದ್ರ ಪಾಲ್ ಸಿಂಗ್ ಅವರೊಂದಿಗೆ ಅವರ ಸಹಾಯಕ ಅಧಿಕಾರಿಯನ್ನೂ ಬಂಧಿಸಲಾಗಿದ್ದು, ಇಬ್ಬರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement